ರಸ್ತೆ ದುರಸ್ತಿ ಕ್ರಮಕ್ಕೆ ಒತ್ತಾಯ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿಸಾರ್ವಜನಿಕ ರಸ್ತೆಯನ್ನು ದುರಸ್ತಿಗೊಳಿಸಿ. ಕೂಡ್ಲಿಗಿಯಿಂದ ಹೊಸಹಳ್ಳಿ ಗ್ರಾಮದ ಒಳಗೆ ಬರುವ ಸಾರ್ವಜನಿಕ ಹಾಗೂ ವಾಹನಗಳ ಓಡಾಡುವ ರಸ್ತೆಯಲ್ಲಿ ತಗ್ಗಿನ ಗುಂಡಿಗಳಾಗಿ ಮಳೆ ಬಂದಾಗ ಜನರು ಹಾಗೂ ವಾಹನಗಳು ಓಡಾಡಲು ಬಹಳ ತೊಂದರೆ ಯಾಗಿರುತ್ತದೆ . ಸರ್ಕಾರಿ ಬಸ್ ನಿಲ್ದಾಣದ ಕಾಂಪೌಂಡ್ ಪಕ್ಕ ಮಳೆ ಬಂದಾಗ ನೀರು ನಿಂತು ಮಳೆನೀರು ಬಸ್ ನಿಲ್ದಾಣದ ಕಾಂಪೌಂಡ್ ಒಳಗಡೆಗೆ ಹೋಗಿ ಕಾಂಪೌಂಡ್ ಗೋಡೆಸಹ ಕುಸಿದು ಬೀಳುವ ಸಂಭವ ಇರುತ್ತದೆ ಕಾನಹೊಸಹಳ್ಳಿ – ಊರಿನ ಒಳಗಡೆ ಸಾರ್ವಜನಿಕ ರಸ್ತೆಯಾಗಿದ್ದು ಈ ಜಾಗದಲ್ಲಿ ಮಾತ್ರ ಕಾಮಗಾರಿ ನಡೆಯದೇ ಹಾಗೆಯೇ ಇರುವುದರಿಂದ ಈ ಅವ್ಯವಸ್ಥೆಗೆ ಕಾರಣವಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕಾಮಗಾರಿಯನ್ನು ಮಾಡಿಸಿ ಸಾರ್ವಜನಿಕರಿಗೂ ಹಾಗೂ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಹೊಸಹಳ್ಳಿಯ ಗ್ರಾಮಸ್ಥರು ಸಾರ್ವಜನಿಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿರುತ್ತಾ ರೇ. ಈ ಸಂದರ್ಭದಲ್ಲ ದಲಿತ ಮುಖಂಡರಾದ ಹೊಸಹಳ್ಳಿ ಗಂಗಾಧರ ಹೇಮಂತಕುಮಾರ . ದಲಿತ ಮುಖಂಡ ಹಾಗೂ ಪತ್ರಕರ್ತರಾದ ಸಿದ್ದಾಪುರದ ಡಿಎಂ ಈಶ್ವರಪ್ಪ. ಸಾರ್ವಜನಿಕರು ಉಪಸ್ಥಿತರಿದ್ದರು..
ವರದಿ. ಡಿ, ಎಂ, ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030