ಮದಬಾವಿ ಗ್ರಾಮದಲ್ಲಿ ಬಾಲ್ಯ ವಿವಾಹ ಆರೋಪ.
ಮಹಾಲಿಂಗಪುರ : ಸಮೀಪದ ಮದಬಾವಿ ಮಹಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ಅಪರಾಧ ಬೆಳಕಿಗೆ ಬಂದಿದೆ.
ಸ್ಥಳೀಯ ಮಹಾಲಿಂಗಪುರದ ಕೆಂಗೇರಿಮಡ್ಡಿಯ
ಅಮೀನಾ ಗಂಡ ನಬೀಸಾಬ ಕುಳ್ಳೊಳ್ಳಿ ಇವರ ಪುತ್ರಿ ಆಯಿಶಾ ಅಪ್ರಾಪ್ತ ಳಾಗಿದ್ದರು ಸಹ ಮದಬಾವಿ ಗ್ರಾಮದ 22 ವರ್ಷದ ಶಾರುಖ್ ಶಿರಾಜಸಾಬ ಉಸ್ತಾದನೊಂದಿಗೆ ವರನ
ಸ್ವ ಗೃಹ ಮುಂದೆ ವಿವಾಹವಾದ ಮತ್ತು ಅದಕ್ಕೆ ಸಹಕರಿಸಿದ ಶಾರುಖ್ ಶಿರಾಜಸಾಬ ಉಸ್ತಾದ, ವರನ ತಂದೆ ಶಿರಾಜಸಾಬ ಗಂಜುಭಕ್ಷ ಉಸ್ತಾದ, ತಾಯಿ ಬಾನುಭೀ ಶಿರಾಜಸಾಬ ಉಸ್ತಾದ, ವಧುವಿನ ತಾಯಿ ಅಮೀನಾ ನಬಿಸಾಬ ಕುಳ್ಳೊಳ್ಳಿ ಇವರ ಮೇಲೆ ಮುಧೋಳದ ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸಾಹೇಬಗೌಡ ಝಂಜರವಾಡ ನಿಡಿದ ದೂರನ್ನಾದರಿಸಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ
ಅಪರಾಧ ವಿಭಾಗದ ಪಿಎಸ್ಐ ಶೇಖರ್ ಎಸ್ ಘಾಟಗೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿಕೊಟ್ಟು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030