ದಿನಾಂಕ 02-10-2022 ರಂದು ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಕಳ್ಳತನ ಮಾಡಿರುವ ಕುರಿತು ಪ್ರಕರಣ ದಾಖಲಾಗಿರುತ್ತದೆ. ಆರೋಪಿತರ ಪತ್ತೆಗೆ ಡಿ.ಎಸ್.ಪಿ ಹೊಸಪೇಟೆ ರವರ ಮಾಗ೯ದಶ೯ನದಲ್ಲಿ, ಸಿ.ಪಿ.ಐ ಹಂಪಿ ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗದ್ದು, ದಿನಾಂಕ 24-10-2022 ರಂದು ಪಿ.ಎಸ್.ಐ ಕಮಲಾಪುರ ಮತ್ತು ಸಿಬ್ಬಂದಿ ಗಸ್ತು ಮಾಡುತ್ತಿರುವಾಗ, ಅನುಮಾನಾಸ್ಪದವಾಗಿ ವ್ಯಕ್ತಿಯನ್ನು ವಿಚಾರಿಸಲಾಗಿ ದಿನಾಂಕ 01-10-2022 ರಂದು ಕಮಲಾಪುರ ಪಟ್ಟಣದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು,ಸದರಿ ಆರೋಪಿತನಿಂದ ಚಿನ್ನದ ಮತ್ತು ಬೆಳ್ಳಿಯ ವಸ್ತುಗಳು ಅಂದಾಜು ಬೆಲೆ 47,600 ರೂಪಾಯಿ ಜಪ್ತಿ ಮಾಡಿ ತನಿಖೆ ಮುಂದುವರೆದಿರುತ್ತದೆ. ಸದರಿ ತಂಡದ ಕಾಯ೯ಚರಣೆಯನ್ನು ಪ್ರಶಂಶಿಸಲಾಗಿರುತ್ತದೆ…
ವರದಿ. ಗಣೇಶ್ ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030