ಕುಖ್ಯಾತಿ ಅಂತರಾಜ್ಯ ಮನೆಗಳ್ಳರ ಬಂಧನ
ರಾಜ್ಯದ ನಾನಾ ಕಡೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ನಾಲ್ವರು ಅಂತರಾಜ್ಯ ಮನೆಗಳ್ಳರನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರನ್ನು ಪುರುಷೋತ್ತಮ್ (19), ಜೀವನ್ (೧೯), ಸಚಿನ್ (೨೨), ಪನಿತ್ ನಾಯ್ಕ್ (೧೯) ಎಂದು ಗುರುತಿಸಲಾಗಿದೆ. ಇವರಿಂದ 9.50.000 ರೂ. ಮೌಲ್ಯದ 188 ಗ್ರಾಂ ಬಂಗಾರದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಅಡುಗೆ ಕ್ಯಾಟರಿಂಗ್, ಬೈಕ್ ಪಾಲೀಶ್, ಪ್ಲೆಕ್ಸ್ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು. ಇವರ ವಿರುದ್ಧ ಆಂದ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿ ಹೊಳಲ್ಕೆರೆಯ ಸಿಪಿಐ ಕೆ.ಎನ್ ರವೀಶ್ ಹಾಗೂ ಚಿಕ್ಕಜಾಜೂರು ಠಾಣೆಯ ಪಿಎಸ್ ಐ ಬಾಹುಬಲಿ ಎಂ ಪಡನಾಡ ನೇತೃತ್ವದ ತಂಡ ಆದ್ರಪ್ರದೇಶ ಸೇರಿದಂತೆ ಇತರ ಪ್ರದೇಶಗಳಿಗೆ ಬೇಟಿ ನೀಡಿ ಈ ಖತರ್ನಾಕ್ ಕಳ್ಳರನ್ನು ಮಟ್ಟಹಾಕಲು ಯಶಸ್ವೀಯಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರುಶುರಾಮ್, ಪಿಎಸ್ ಐ ಎಚ್ .ಆರ್ ಲೋಕೆಶ್, ಪೊಲೀಸ್ ಸಿಬ್ಬಂದಿ ರುದ್ರೇಶ್, ರಮೇಶ್, ಗಿರೀಶ್, ಕುಮಾರಸ್ವಾಮಿ, ಮಂಜುನಾಥ್, ಕಿರಣ್, ಕಂಪ್ಯೂಟರ್ ವಿಭಾಗದ ರಾಘವೇಂದ್ರ, ಶ್ಲಾಘಿಸಿದ್ದಾರೆ…
ವರದಿ. ಸುರೇಶ್.ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030