ಹೊನ್ನಾಳಿ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ದಿ ಯೋಜನಾವತಿಯಿಂದ ಪರಿಸರ ಜಾಗೄತಿ ಕಾರ್ಯಕ್ರಮ…!!!

Listen to this article

ಹೊನ್ನಾಳಿ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ದಿ ಯೋಜನಾವತಿಯಿಂದ ಪರಿಸರ ಜಾಗೄತಿ ಕಾರ್ಯಕ್ರಮ.

ಆನವೇರಿ ವಲಯದ ಲಿಂಗಾಪುರ ಕಾರ್ಯಕ್ಷೇತ್ರ ದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ದಿ ಯೋಜನೆಯಿಂದ ಪರಿಸರ ಜಾಗೄತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ನೆರವೆರಿಸಲಾಯಿತು
ವೇದಿಕೆಯ ಗಣ್ಯರಿಗೆ ಮೆಲ್ವಿಚಾರಕರಾದ ಪ್ರಕಾಶರವರು ಸ್ವಾಗತಿಸಿದರು ಕಾರ್ಯಕ್ರಮದ ಅದ್ಯಕ್ಷತೆಯನ್ನು ಒಕ್ಕೂಟದ ಅದ್ಯಕ್ಷರಾದ ನಂದಿನಿ ಅವರು ವಹಿಸಿದ್ದರು.ಗ್ರಾಮಪಂಚಾಯಿತಿ ಸದಸ್ಯರಾದ ರೇಖಾ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೆ ಕಾರ್ಯಕ್ರಮವನ್ನು ಉಧ್ದೇಶಿಸಿ ಮಾತಾನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ . ಇಂದು ನಾವು ಪರಿಸರವನ್ನು ಕಾಪಾಡಿದರೆ ನಾಳೆ ಪರಿಸರ ನಮ್ಮನ್ನು ಕಾಪಾಡುತ್ತೆ ಹೇಗೆ ಅಂದರೆ ಕೋವಿಡ್– 19 ನಿಂದ ಆಮ್ಲಜನಕ ಕೊರತೆಯಿಂದ ಬಹಳಷ್ಟು ಸಾವು ಸಂಭವಿಸಿದೆ ಕಾರಣ ಮರಗಳನ್ನ ಕಡಿದು ಕಟ್ಟಿಗೆ ಮಾಡಿದ್ದೆವೆ ಇಂದು ಅದೆ ಕಟ್ಟಿಗೆ ಆಮ್ಲಜನಕದ ಕೊರತೆಯಿಂದ ಸತ್ತ ದೇಹವನ್ನು ಸುಡುತಿದೆ ಮನುಷ್ಯ ಮರಗಳನ್ನು ಉಸಿರಾಡಲು ಬಿಟ್ಟಿದ್ದರೆ ಇಂದು ಮನುಷ್ಯ ಆಮ್ಲಜನಕದ ತೊಂದರೆಯಿಂದ ಸಾಯುತ್ತಿರಲಿಲ್ಲ ಅದ್ದರಿಂದ ಪ್ರತಿಯೊಬ್ಬ ಮನುಷ್ಯ ಒಂದು ವರ್ಷಕ್ಕೆ ಒಂದೆ ಸಸಿ ಪೊಷಣೆ ಮಾಡಿ ಬೆಳೆಸಿದರೆ ಆಮ್ಲಜನಕದ ಕೊರತೆಯಾಗುವುದಿಲ್ಲ ಎಂದು ಹೇಳಿದರು. ಹಾಗೆ ಸಂಘದ ಸದಸ್ಯರಿಗೆ ಸಸಿಗಳನ್ನ ವಿತರಿಸಲಾಯಿತು.
ಸೇವಾಪ್ರತಿನಿಧಿಯಾದ ಕೇ. ಟಿ . ಹನುಮಂತರಾವ್ ಅವರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಜಾತ , ಗ್ರಾಮ ಪಂಚಾಯಿತಿ ಸದಸ್ಯರು ಶ್ರೀಮತಿ ರೇಖಾ , ಮೇಲ್ವಿಚಾರಕರಾದ ಪ್ರಕಾಶ , ಒಕ್ಕೂಟದ ಅದ್ಯಕ್ಷೆ ಶ್ರೀಮತಿ ನಂದಿನಿ ಸಂಘಗಳ ಪ್ರಂಬಂಧಕರು ಸಂಯೋಜಕರು ಮತ್ತು ಕೋಶಾದಿಕಾರಿಗಳು ಮತ್ತು ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು.

ವರದಿ. ರೇಖಾ, ಆರ್ ಲಿಂಗಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend