ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಮಾರುತಿ ಬಡಾವಣೆಯ ಕೆಎಚ್ಡಿಸಿ ಕಾಲೋನಿಯಲ್ಲಿ ನಡೆದ ಕೊಲೆ ಪ್ರಕರಣದ ತನಿಖೆ ಇಂದು ಘಟನಾ ಸ್ಥಳಕ್ಕೆ ಎಸ್ಪಿ ಜಿ.ರಾಧಿಕಾ ಭೇಟಿ ಪರಿಶೀಲನೆ ನಡೆಸಿದರು. ಮಧ್ಯಪಾನ ಮಾಡಲು ಹಣ ನೀಡಲಿಲ್ಲವೆಂಬ ಕಾರಣಕ್ಕೆ ಮದ್ಯ ಪಾನಕ್ಕೆ ದಾಸನಾಗಿದ್ದ ಮಗನೊಬ್ಬ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ರತ್ನಮ್ಮ (45) ಕೊಲೆಗೀಡಾದ ಮಹಿಳೆ. ಪುತ್ರ ಲೋಕೇಶ(22) ಕೊಲೆ ಮಾಡಿದ ಆರೋಪಿ. ಪಟ್ಟಣದ ಮಾರುತಿ ಬಡಾವಣೆಯ ಕೆಎಚ್ಡಿಸಿ ಕಾಲೋನಿಯಲ್ಲಿ ತಾಯಿ, ಮಗ ಒಟ್ಟಿಗೆ ವಾಸವಾಗಿದ್ದರು. ಮದ್ಯಕ್ಕೆ ದಾಸನಾಗಿದ್ದ ಮಗ ಲೋಕೇಶ ಕೆಲಸಕ್ಕೆ ಹೋಗದೆ ನಿತ್ಯವೂ ಕುಡಿಯಲು ಹಣ ನೀಡುವಂತೆ ತಾಯಿಯ ಬಳಿ ಗಲಾಟೆ ಮಾಡುತ್ತಿದ್ದ ಅನೇಕ ಬಾರಿ ಬುದ್ದಿ ಹೇಳಿದ್ದರೂ ಬದಲಾಗಿರಲಿಲ್ಲ. ಕೆಲಸಕ್ಕೆ ಹೋಗದೆ ನಿತ್ಯವೂ ಕುಡಿದು ಬರುತ್ತಿದ್ದ ಎನ್ನಲಾಗಿದೆ. ಗುರುವಾರ ರಾತ್ರಿ ಕುಡಿಯಲು ಹಣ ನೀಡುವಂತೆ ಪೀಡಿಸಿದ್ದಾನೆ. ಇಲ್ಲ ಎಂದು ತಾಯಿ ಹೇಳಿದಾಗ ಕೋಪಗೊಂಡ ಪುತ್ರ ತಲೆಯನ್ನು ಕಬ್ಬಿಣದ ಬಾಗಿಲಿಗೆ ದಬ್ಬಿದ್ದಾನೆ. ಇದರಿಂದ ತಲೆಗೆ ಪೆಟ್ಟು ಬಿದ್ದು ರತ್ನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮೊಳಕಾಲ್ಮುರು ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ಜಿ.ರಾಧಿಕಾ ಭೇಟಿ ಪರಿಶೀಲನೆ ನಡೆಸಿದರು, ಹಾಗೂ ಡಿವೈಎಸ್ಪಿ ಶ್ರೀಧರ, ಸಿಪಿಐ ಉಮೇಶ ನಾಯಕ, ಪಿಎಸ್ಐ ಎಂ.ಕೆ.ಬಸವರಾಜ, ಸಿಬ್ಬಂದಿ ವರ್ಗದವರು ಪರಿಶೀಲಿಸಿದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030