ಎಐಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕೋವಿಡ್ ಸಹಾಯ-ಹಸ್ತ ಕಾರ್ಯಕ್ರಮಕ್ಕೆ ಇಂದು ಚಳ್ಳಕೆರೆಯಲ್ಲಿ ಚಾಲನೆ ನೀಡಿದೆನು.
ಕೊರೋನಾ ಮೃತ ಕುಟುಂಬಗಳು ತಮಗೆ ಸರ್ಕಾರದಿಂದ ಸಿಗಬೇಕಾಗಿರುವ ಪರಿಹಾರದ ಬಗ್ಗೆ ಗೊಂದಲದಲ್ಲಿವೆ. ಈ ಹಿನ್ನೆಲೆ ಇಂದು ಚಳ್ಳಕೆರೆಯ ಚಿತ್ರಯ್ಯನಹಟ್ಟಿ ಮತ್ತು ವಾಲ್ಮೀಕಿ ನಗರದ ಕೊರೋನಾ ಮೃತ ಕುಟುಂಬಗಳ ಮನೆಗಳಿಗೆ ತೆರಳಿ, ಕೋವಿಡ್ ಪರಿಹಾರಕ್ಕೆ ಸಂಬಂಧಪಟ್ಟಂತೆ ಮೃತರ ಹಲವು ದಾಖಲೆಗಳನ್ನು ಪಡೆದು ಸರ್ಕಾರದಿಂದ ಸಿಗಬೇಕಾಗಿರುವ ಪರಿಹಾರವನ್ನು ಸಾಧ್ಯವಾದಷ್ಟು ಶೀಘ್ರವೇ ತಲುಪುವಂತೆ ಮಾಡುವುದಾಗಿ ಭರವಸೆ ನೀಡಿದೆನು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷಿ ಕೃಷ್ಣಮೂರ್ತಿ ನಗರಸಭಾ ಸದಸ್ಯರುಗಳಾದ ಕವಿತಾ ಬೋರಣ್ಣ ವೆಂಕಟೇಶ್ ಸುಮಾ ಬರಮಯ್ಯ ವಿರೂಪಾಕ್ಷಪ್ಪ ಮಲ್ಲಿಕಾರ್ಜುನ್ ಚಳ್ಳಕೆರೆಪ್ಪ ಮುಖಂಡರಾದ ಪ್ರಸನ್ನಕುಮಾರ್ ಆಂಜನಪ್ಪ ಪ್ರಸನ್ನಕುಮಾರ್ ಹಾಜರಿದ್ದರು.
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030