ವರದಿ. ಎಚ್ಚರಿಕೆ ಪತ್ರಿಕೆ ವರದಿಗಾರ
ರಾಜ್ಯದಲ್ಲಿ ಮತ್ತೆ ಕೊರೋನಾ ಎರಡನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಅತೀ ವೇಗವಾಗಿ ಹರಡುತ್ತಿದೆ ಮತ್ತು ಈ ಒಂದು ಮಹಾಮಾರಿ ಖಾಯಿಲೆಯ ವೇಗ ಹೇಗಿದೆಯಂದರೆ ಹಾವಿನ ವಿಷದಂತೆ ಹಬ್ಬುತ್ತಿದ್ದು ಈಗ ದೇಶದಲ್ಲಿ ನಮ್ಮ ಒಂದು ಕರ್ನಾಟಕ ರಾಜ್ಯ ಅಪಾಯದ ಒಂದು ಅಂಚಿನಲ್ಲಿದೆ, ಆದ್ದರಿಂದ ರಾಜ್ಯದ ಸಾರ್ವಜನಿಕರು, ಮಾಸ್ಕ್ ಹಾಗೂ ಸ್ಯಾನಿಟೈಸರು ಬಳಸಬೇಕು ಅನ್ನುವ ಒಂದು ಸಂದೇಶ ಮತ್ತು ಗುಂಪು ಗುಂಪಾಗಿ ಸೇರುವುದನ್ನು ಕಡಿಮೇಗೊಳಿಸುವಂತೆ ಆರೋಗ್ಯ ಇಲಾಖೆ ಉತ್ತಮವಾದ ಸಂದೇಶವನ್ನು ಕೊಟ್ಟರು ಲೆಕ್ಕಿಸದ ಸಾರ್ವಜನಿಕರ ಒಂದು ದಿಟ್ಟ ನಡೆ ಮುಂದೆಯಾವರೀತಿಯಲ್ಲಿ ಇರುವುದೋ ನೋಡೋಣ ಅದೇನೇ ಇರಲಿ.
ವಿಜಯನಗರ ಜಿಲ್ಲೆಯ, ಹರಪನಹಳ್ಳಿ ತಾಲೂಕಿನ, ಜೆ, ಎಂ, ಎಫ್, ಸಿ, ನ್ಯಾಯಲಯದ 05 ಜನ ಸಿಬ್ಬಂದಿಗಳಿಗೆ ಕೋವಿಡ್ 19 ಪಾಸಿಟಿವ್ ಬಂದಿದ್ದು ದೃಢಪಟ್ಟಿದೆ ಆದ್ದರಿಂದ ಈ ಒಂದು ಪಟ್ಟಣದ ಸಾರ್ವಜನಿಕರಿಗೆ ಯಾರಾದರೂ ಕೋರ್ಟ್ ನ ಸಿಬ್ಬಂದಿಗಳ ಜೊತೆಗೆ ಮತ್ತು ವಕೀಲರ ಜೊತೆಗೆ ತಮ್ಮ ಒಂದು ಒಡನಾಟವೇನಾದರೂ ಇದ್ದರೆ ಮುಂದಿನ 7 ದಿನಗಳವರೆಗೆ ಸ್ವಯಂಪ್ರೇರಿತವಾಗಿ ಹೋಮ್ ಇಸೋಲೇಷನ್ ನಲ್ಲಿ ಇರತಕ್ಕದ್ದು ಎನ್ನುವ ಒಂದು ಮುನ್ಸೂಚನೆಯನ್ನು ಸೂಚಿಸಲಾಗಿದೆ ಮತ್ತು ಹಾಗೇನಾದರೂ ಕಂಡುಬoದಲ್ಲಿ ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಸೂಚಿಸಲಾಗಿದೆ..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030