ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆಯ ವರದಿಗಾರರು
ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ ಕಾನಹೋಸಹಳ್ಳಿ ಪಟ್ಟಣದಲ್ಲಿ ರೈತರು ದಿನದಿಂದ, ದಿನಕ್ಕೆ ಹೆಚ್ಚುತ್ತಿರುವ ರಸಗೊಬ್ಬರದ ಬೆಲೆ ಏರಿಕೆಯ ಒಂದು ಅಬ್ಬರವನ್ನು ತಗ್ಗಿಸಿ ಹಾಗೂ ಸರಿಯಾದ ಬೆಲೆಯನ್ನು ನಿಗದಿಗೊಳಿಸುವಂತೆ ತಾಲೂಕಿನ ಉಪತಹಸೀಲ್ದಾರ್ ರವರಿಗೆ ಮನವಿಯನ್ನು ಸಲ್ಲಿಸಿದರು,
ಈ ಒಂದು ಸಂದರ್ಭದಲ್ಲಿ ತಾಲೂಕಿನ, ಎಂ. ಬಿ. ಅಯ್ಯನಹಳ್ಳಿ ಗ್ರಾಮದ, ಎಚ್. ಅರುಣ್ ಕುಮಾರವರು ಮನವಿ ಪತ್ರವನ್ನು ಸಲ್ಲಿಸಿ ಅಧಿಕಾರಿಗಳೊಂದಿಗೆ, ರಾಜ್ಯದಲ್ಲಿ ನಮ್ಮ ಒಂದು ತಾಲೋಕು ಅತೀ ಇಂದುಳಿದ ತಾಲೋಕು ಎಂದು ಗುರುತಿಸಿಕೊಂಡಿದೆ ಆದ್ದರಿಂದ ಪ್ರತಿ ವರ್ಷ ಇಲ್ಲಿನ ರೈತರು ಬರೀ ಬೆಳೆ ನಷ್ಟದ ಒಂದು ಆಘಾತವನ್ನೇ ಎದುರಿಸುತ್ತಾರೆ, ಆದ್ದರಿಂದ ತಾವುಗಳು ನಿಮ್ಮ ಮೇಲಾಧಿಕಾರಿಗಳಿಗೆ ನಮ್ಮ ಒಂದು ಮನವಿಪತ್ರವನ್ನು ತಲುಪಿಸಿ ಸರಿಯಾದ ಬೆಲೆಯನ್ನು ನಿಗದಿಪಡಿಸಬೇಕೆಂದು ಹೇಳಿದರು ಈ ಒಂದು ಸಂದರ್ಭದಲ್ಲಿ ಸುತ್ತಲಿನ ಗ್ರಾಮದ ರೈತರು ಹಾಗೂ ಕಾನಹೋಸಹಳ್ಳಿಯ ಹಲವು ಯುವ ಮುಖಂಡರು ಸಹ ಭಾಗಿಯಾಗಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030