ವರದಿ. ನಳಿನಿ ಬೆಂಗಳೂರು
ರಾಜ್ಯದಲ್ಲಿ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವೆ ಸಮರ ಮುಂದುವರೆದಿದೆ. ಇಂದಿಗೆ ಮೂರನೇ ದಿನಕ್ಕೆ ಸಾರಿಗೆ ನೌಕರರ ಮುಷ್ಕರ ಕಾಲಿಟ್ಟಿದೆ. ರಾಜ್ಯ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಬಿಲ್ ಖುಲ್ ಇಲ್ಲ ಅಂದ್ರೇ, ಸಾರಿಗೆ ನೌಕರರು ಮಾತ್ರ ನಾವು ಬೇಡಿಕೆ ಈಡೇರಿಸದಿದ್ದರೇ ಮುಷ್ಕರ ಕೈಬಿಡೋದಿಲ್ಲ ಎಂಬ ಹಠಕ್ಕೆ ಬಿದ್ದು ಮುಂದುವರೆಸಿದ್ದಾರೆ.ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ತಮ್ಮ ಅನಿರ್ಧಿಷ್ಟಾವಧಿಯ ಮುಷ್ಕರ ಮುಂದುವರೆಸಿದ್ದಾರೆ. ತಮ್ಮ ವಿವಿಧ ಬೇಡಿಕೆಗೆ ಆಗ್ರಹಿಸಿ ನಡೆಸುತ್ತಿರುವಂತ ಪ್ರತಿಭಟನೆಯನ್ನು ಮೂರನೇ ದಿನವೂ ಮುಂದುವರೆಸಿದ್ದಾರೆ.
ಸಾರಿಗೆ ನೌಕರರ ಪ್ರತಿಭಟನೆಯಿಂದಾಗಿ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಸಾರಿಗೆ ಬಸ್ ಗಳಿಲ್ಲದೇ ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ಉಂಟಾಗಿದೆ.
ಸಾರಿಗೆ ನೌಕರರ ಮುಷ್ಕರ : 2 ದಿನದಲ್ಲಿ ‘ಸಾರಿಗೆ ಇಲಾಖೆ’ಗೆ ಆದ ನಷ್ಟವೆಷ್ಟು ಗೊತ್ತಾ?
ಇನ್ನೂ ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆದಿರುವಂತ ರಾಜ್ಯ ಸರ್ಕಾರ, ಬೇಡಿಕೆ ಈಡೇರಿಸುವಂತ ಕ್ರಮ ವಹಿಸುವ ಬದಲು, ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ 2 ವರ್ಷಗಳ ಹಿಂದೆ ನಿವೃತ್ತರಾದಂತ ಸಾರಿಗೆ ನೌಕರರನ್ನು ಮತ್ತೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಈ ಸಾರಿಗೆ ನೌಕರರ ಮುಷ್ಕರ ಯಾವಾಗ್ ಮುಗಿಯತ್ತೋ, ಯುಗಾಧಿಯ ವೇಳೆಗೆ ಊರಿಗೆ ಹೋಗೋಕೆ ಸಾರಿಗೆ ಬಸ್ ಸಿಗ್ತಾವೋ ಇಲ್ಲವೇ ಎನ್ನುವ ಬಗ್ಗೆ ಪ್ರಯಾಣಿಕರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030