ಅಬ್ಬಾ! ಇದೆಂತಾ ಅದ್ಭುತ ಕಾರ್ಯ?
ಎಂ_ಪಿ_ವೀಣಕ್ಕ ಎಂಬ ಸಮಾಜ ಸೇವಕಿಯ ಸತ್ಕಾರ್ಯ!!ಕೋವಿಡ್ ಸಂಕಷ್ಟ ಸಮಯದಲ್ಲಿ ಹರಪನಹಳ್ಳಿ ಕ್ಷೇತ್ರದಾದ್ಯಂತ ಜನ ಸೇವೆಯಲ್ಲಿ ಮುಂಚೂಣಿ ಸ್ಥಾನದಲ್ಲಿರುವವರ ಪಟ್ಟಿಯಲ್ಲಿ ಎಂ_ಪಿ_ವೀಣಾ_ಮಹಾಂತೇಶ್ ರವರು ಉನ್ನತ ಸ್ಥಾನದಲ್ಲಿದ್ದಾರೆ ಎನ್ನುವುದನ್ನು ಈ ಒಂದು ಕಾರ್ಯ ಸಾಬೀತುಪಡಿಸಬಲ್ಲದು. ಕಾಂಗ್ರೆಸ್ ಜನಪರ ಚಳುವಳಿ ಎನ್ನುವದಕ್ಕೆ ಹರಪನಹಳ್ಳಿಯಲ್ಲಿ ಈ ಆಂದೋಲನಕ್ಕೆ ಅರ್ಥಪೂರ್ಣ ವ್ಯಾಖ್ಯಾನ ತಂದವರು ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂಪಿ ವೀಣಾ ಮಹಾಂತೇಶ್ ,
ಹೌದು, “ಸಮಾಜಸೇವೆ ಎಂದರೆ ಎಂ.ಪಿ ವೀಣಾ,” “ಎಂ.ಪಿ ವೀಣಾ ಎಂದರೆ ಸಮಾಜಸೇವೆ” ಎನ್ನುವ ಹಾಗೇ ಯಾರಿಗೇನು ಕಡಿಮೆ ಇಲ್ಲದಂತೆ, ಜನರಿಂದ, ಜನರ ಸೇವೆಗಾಗಿಯೇ ಆಯ್ಕೆಯಾದ ಜನಪ್ರತಿನಿಧಿಗಳು ಮಾಡದ ಕೆಲಸವನ್ನು ನಮ್ಮ ವೀಣಕ್ಕನವರು ಮಾಡುತ್ತಿರುವುದು ಕ್ಷೇತ್ರದ ಜನತೆಗೆ ಎಲ್ಲಿಲ್ಲದ ಉತ್ಸಾಹ!
ಕ್ಷೇತ್ರದಾದ್ಯಂತ ಲಾಕ್ಡೌನ್ ನಿಂದ ಕಂಗಾಲಾದ ಜನತೆಗೆ, ಹಸಿದವರಿಗೆ ಅನ್ನ ನೀಡುವ ಆಹಾರದ_ಕಿಟ್ ಹಾಗೂ ಕೊರೋನಾ ಸೋಂಕಿತರು ಮತ್ತು ರೋಗ ಲಕ್ಷಣಗಳಿರುವ ಜನರನ್ನು ಗುರುತಿಸಿ ಅವರಿಗೆ ಉಚಿತ ಔಷಧಿಯ_ಕಿಟ್ ಗಳನ್ನು ನೀಡಲು ತಮ್ಮ ಹರಪನಹಳ್ಳಿಯ ಆಚಾರ್ಯ ಬಡಾವಣೆಯ ಗೃಹ ಕಛೇರಿಯಲ್ಲಿ ತಮ್ಮ ಪಡೆಯೊಂದಿಗೆ ತಯಾರಿಸಲು ನಿರ್ದೇಶನ ನೀಡುತ್ತಿರುವುದು ಶ್ಲಾಘನೀಯ ಕಾರ್ಯ!!
ತಮ್ಮ ವೈಯಕ್ತಿಕ ಜೀವನದ ಯಾವುದೇ ತುರ್ತು ಕೆಲಸಗಳಿರಲಿ ಅದನ್ನೆಲ್ಲ ಬದಿಗೊತ್ತಿ ಜನರಿಗಾಗಿ ಹಗಲಿರುಳು ಮಿಡಿಯುವ ಹೃದಯ ಕ್ಷೇತ್ರದ ಜನರಿಗೆ ಸಿಕ್ಕಿರುವುದು ಪುಣ್ಯದ ಕೆಲಸವೇ ಸರಿ!
ಕ್ಷೇತ್ರದ ಜನರ ಆಶೀರ್ವಾದ, ಪ್ರೋತ್ಸಾಹ ಸದಾ ನಿಮ್ಮ ಮೇಲಿರಲಿ ಎಂದು ಆಶಿಸೋಣ…...
ವರದಿ. ಬಸಣ್ಣಿ ಬಣವಿಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030