ಹರಪನಹಳ್ಳಿಯಲ್ಲಿ ನಿರಂತರವಾಗಿ ಮುಂದುವರೆದ ವೀಣಾ ಸಹಾಯ ಹಸ್ತ
ಕೋವಿಡ್ ನಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಸಹಾಯಹಸ್ತ ಚಾಚಿದ ಎಂ,ಪಿ,ವೀಣಾ ಮಹಾಂತೇಶ್!
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದ ಮೇರೆಗೆ ಹರಪನಹಳ್ಳಿ ಕ್ಷೇತ್ರದ ಯಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಚಿರಸ್ಥಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಗುಂಡಗತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೋವಿಡ್ ನಿಂದ ಮೃತಪಟ್ಟ ಸದಸ್ಯರ ಕುಟುಂಬಗಳಿಗೆ ಭೇಟಿ ನೀಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ,ಪಿ,ವೀಣಾ ಮಹಾಂತೇಶ್ ರವರು ಸಾಂತ್ವನ_ಸಮಾಧಾನ ತಿಳಿಸಿ ದುರಾದೃಷ್ಟ ಘಟನೆಗೆ ವಿಷಾದ ವ್ಯಕ್ತ ಪಡಿಸಿದರು.
ಕೋವಿಡ್ ನಿಂದ ಮೃತಪಟ್ಟ ಮನೆಗಳ ಸದಸ್ಯರಿಗೆ ಧೈರ್ಯತುಂಬಿ ಈ ಸಂಧಿಗ್ದ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಅಭಯಹಸ್ತವನ್ನು ನೀಡಿ ಅವರಿಗೆ ರೇಷನ್ ಕಿಟ್, ಬಟ್ಟೆ, ಗಡಿಯಾರ ವಿತರಿಸಿ , ಅಲ್ಪ ಧನಸಹಾಯವನ್ನು ಮಾಡಿ ವಿಶ್ವಾಸ ತುಂಬಿದರು ..
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030