ನಾಣ್ಯಾಪುರ:ವಾಂತಿ ಬೇದಿ ಆತಂಕದಲ್ಲಿ ಗ್ರಾಮಸ್ಥರು- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ನಾಣ್ಯಾಪುರ ಗ್ರಾಮದಲ್ಲಿ,ಕಲುಷಿತಬ ನೀರು ಸರಬರಾಜಿನಿಂದಾಗಿ ವಾಂತಿಬೇದಿಯಾಗಿದೆ ಎಂದು ತಿಳಿದುಬಂದಿದೆ.ನಾಣ್ಯಾಪುರ ಗ್ರಾಮದ ಒಂದು ಭಾಗದ ಸುಮಾರು 20ಜನರಿಗೆ ವಾಂತಿ ಬೇದಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ, ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ತಾಲೂಕುಗಳಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಗ್ರಾಮದ ಮುಖಂಡ ದಿಬ್ಬದಳ್ಳಿ ಮಲ್ಲಪ್ಪ ಸೇರಿದಂತೆ ಗ್ರಾಮದ ಯುವಕರು ತಿಳಿಸಿದ್ದಾರೆ.ಆದರೆ ಗ್ರಾಪಂ ಅಧಕಾರಿ ಇದನ್ನು ತಳ್ಳಿಹಾಕಿದ್ದು,ವಾಂತಿ ಬೇದಿ ಪ್ರಕರಣ ಜರುಗಿಯೇ ಇಲ್ಲವೆಂದು ಹೇಳುತಿದ್ದಾರೆ.ಜರುಗಿರುವುದಾಗಿ ಕೆಲ ಗ್ರಾಮಸ್ಥರೇ ತಿಳಿಸಿದ್ದಾರೆ.ಗ್ರಾಮಸ್ಥರು ಅಧಿಕಾರಿಗಳ ನಿರ್ಲಕ್ಷ್ಯತನ ಹಾಗೂ ಪ್ರಕರಣ ಮುಚ್ಚಿಹಾಕುವ ಹುನ್ನಾರವೆಂದು ಆಕ್ರೋಶವೆಕ್ತಪಡಿಸಿದ್ದಾರೆ.
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030