ಕಾರು, ಲಾರಿ ಡಿಕ್ಕಿ ಬೀಕರ ಅಪಘಾತ ಸ್ಥಳದಲ್ಲಿ 4 ಸಾವು.
ಸಿಂಧನೂರ : ಜುಲೈ 18 ಕಾರು ಹಾಗೂ ಲಾರಿ ಪರಸ್ಪರ ಡಿಕ್ಕಿಯಾಗಿ ಸ್ಥಳದಲ್ಲಿ ಒಂದೇ ಕುಟುಂಬದ 4 ಜನ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಜವಳಗೇರಾದ ಬಾಲಯ್ಯ ಕ್ಯಾಂಪ್ ಹತ್ತಿರ ಇಂದು ಬೆಳಗಿನ ಜಾವ 6.30 ಕ್ಕೆ ದುರ್ಘಟನೆ ಸಂಭವಿಸಿದೆ.
ಬೆಂಗಳೂರಿನಿಂದ ಹೈದರಾಬಾದಿಗೆ ಹೊರಟ ಕಾರು ನಂ TS.08 H.G. 5584 ತೆಲಂಗಾಣ ದಿಂದ ಸಿಂಧನೂರ ಕಡೆ ಹೊರಟ ಲಾರಿ ನಂ. AP.21.Y.6498 ಇಂದು ಮುಂಜಾನೆ 6.30ಕ್ಕೆ ಜವಗೇರಾದ ಬಾಲಯ್ಯ ಕ್ಯಾಂಪ ಹತ್ತಿರದ ಈ ಬೀಕರ ಅಪಘಾತದಲ್ಲಿ ಪ್ರದೀಪ ಸೆಕ್ಷನ್ ವಯಸ್ಸು 35, ಹೆಂಡತಿ ಫುರ್ಣಿಮಾ ವಯಸ್ಸು 30, ಮಕ್ಕಳಾದ ಜತೀನ ವಯಸ್ಸು 12, ಮಾಯೀನ್ ವಯಸ್ಸು 7 ವರ್ಷ ಒಂದೆ ಕುಟುಂಬದ ನಾಲ್ವರು ಸಾವನಪ್ಪಿರುವ ಘಟನೆ ಪೋಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸುದ್ದಿ ತಿಳಿದು ಸಿಪಿಐ ಉಮೇಶ ಕಾಂಬಳೆ, ಬಳಗಾನೂರ ಪೋಲಿಸ್ ಠಾಣೆಯ ಪಿಎಸ್ಐ ವಿರೇಶ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಲಾರಿಯೊಳಗೆ ಸೇರಿಕೊಂಡಿದ್ದ ಕಾರನ್ನು ಜೆಸಿಬಿಯಿಂದ ಹೊರ ತೆಗೆದು, ಶವಗಳನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ತಂದು ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.
ಈ ವಿಷಯ ತಿಳಿದು ಸುತ್ತ ಮುತ್ತಲಿನ ಜನ ಅಪಘಾತ ನಡೆದ ಸ್ಥಳಕ್ಕೆ ಬಂದು ನಿಂತು ನೋಡುತ್ತಿದ್ದರು. ಸ್ಥಳದಲ್ಲಿ ಸ್ವಲ್ಪ ಸಮಯ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಟ ನಡೆಸಿದರು. ನಂತರ ಜನರನ್ನು ಚದುರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಬಳಗಾನೂರ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030