ಘಟಪ್ರಭಾ ನದಿಯ ಸೇತುವೆಯೊಂದು ಮುಳುಗಡೆ ನಂದಗಾಂವ ಅವರಾದಿ ಸಂಪರ್ಕ ಬಂದ್.
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ನಂದಗಾಂವ ಪಕ್ಕದ ಘಟಪ್ರಭಾ ನದಿ ಸೇತುವೆ ಸಂಪೂರ್ಣ ನೀರಲ್ಲಿ ಮುಳುಗಿ ಎರಡು ಅಂತರ ಜಿಲ್ಲಾ ಗಡಿ ಗ್ರಾಮಗಳ ಸಂಪರ್ಕ ಬಂದ್ ಆಗಿ ಜನಜೇವನ ಅಸ್ತವ್ಯಸ್ತವಾಗಿದೆ ಬೆಳಗಾವಿ ಜಿಲ್ಲೆಯ ಗಡಿ ಗ್ರಾಮ ಅವರಾದಿ,ಯರಗುದ್ರಿ ಗ್ರಾಮಗಳ ಜನ ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಮಾರ್ಕೆಟಗೆ ಮತ್ತು ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಜನರ ಅತ್ಯಂತ ಸಮೀದ ಸಂಪರ್ಕ ಕೊಂಡಿಯಾಗಿತ್ತು ಆದರೆ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗೆ ಸಾಕಷ್ಟು ನೀರು ಹರಿದು ಬರುತ್ತಿದ್ದು ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ ಈಗಾಗಲೇ ನದಿಗೆ ಇಟ್ಟಿದ್ದು ಪಂಪಸೆಟಗಳನ್ನು ತೆರವು ಮಾಡಿದ ರೈತರು ಸುರಕ್ಷಿತ ಸ್ಥಳಗಳಲ್ಲಿ ವಾಸಿಸುವುದು ಅಗತ್ಯ.
ವರದಿ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030