ಸಿಂಧನೂರು: ಇಂದಿನಿಂದ 15 ದಿನಗಳ ಕಾಲ ಕಠಿಣ ಲಾಕ್ಡೌನ್ ರಸ್ತೆಗಿಳಿದ ಖಾಕಿ ಪಡೆ. ತಾಲೂಕಿನ ತಹಸೀಲ್ದಾರ್ಕಾರ್ಯಲಯದ ಮಹಾತ್ಮ ಗಾಂಧಿ ವ್ರತ್ತದಲ್ಲಿ ಪೋಲಿಸ್ ಅಧಿಕಾರಿಗಳು ವಾಹನಗಳನ್ನು ತಡೆದು ಬಿಸಿ ಮುಟ್ಟಿಸಿದರು. ಮಿತಿಮೀರಿ ಕೋರೊನಾ ಅಟ್ಟಹಾಸ ಹೆಚ್ಚಾಗುತ್ತಿದ್ದು ಕಡಿವಾಣ ಹಾಕಲು ಇಂದಿನಿಂದ 15 ದಿನಗಳ ಕಾಲ ಕಠಿಣ ಲಾಕ್ಡೌನ್ ಪ್ರಾರಂಭವಾಗಿದ್ದು,ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು ನಂತರ ಅಂಗಡಿ-ಮುಗ್ಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಲಾಯಿತು. ಬೆಳಗ್ಗೆ 10 ಗಂಟೆಯ ನಂತರ ಗುಂಪು ಗುಂಪಾಗಿ ಸೇರಿರುವ ಜನರಿಗೆ ಪ್ರಕರಣ ದಾಖಲಿಸಲಾಗುವುದು ಯಾವುದೇ ಬೈಕ್, ಕಾರ, ಅಟೋ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ವಾಹನಗಳನ್ನು ಜಪ್ತಿ ಮಾಡಿ ಠಾಣೆಗೆ ಕರೆದೊಯ್ಯಲಾಗುವುದು ಜೊತೆಗೆ ದಂಡ ಹಾಕುವ ಮೂಲಕ ಪ್ರಕರಣ ದಾಖಲಿಸಿ ಕಾನೂನು ಕ್ರಮಗಳನ್ನು ಸಹ ತೆಗೆದುಕೊಳ್ಳುವುದಾಗಿ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ನಗರ ಪಿಎಸ್ಐ ವಿಜಯಕೃಷ್ಣ ಜನರಿಗೆ ಎಚ್ಚರಿಕೆ ನೀಡಿದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030