*ಕೂಡ್ಲಿಗಿ:ಪಪಂ ಸದಸ್ಯ ಸೈಯ್ ಶುಕೂರ್ ರಿಂದ “ರಂಜಾನ್” ಪ್ರಯುಕ್ತ ಆಹಾರ ಕಿಟ್ ವಿತರಣೆ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಪಟ್ಟಣ ಪಂಚಾಯ್ತಿ 5ನೇ ವಾರ್ಡ್ ಸದಸ್ಯ ಹಾಗೂ ಮುಸ್ಲೀಂ ಯುವ ಮುಖಂಡರಾದ ಸೈಯದ್ ಶುಕೂರ್ ರವರು.
ರಂಜಾನ್ ಹಬ್ಬದ ಪ್ರಯುಕ್ತ ಹಾಗೂ ಕೋವಿಡ್ 19 ಲಾಕ್ ಡೌನ್ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವನ್ನು ನೀಡುವ ಮೂಲಕ ಯುವ ಪೀಳಿಗೆಗೆ ಹಾಗೂ ಇತರೆ ಜನ ಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.
ಲಾಕ್ ಡೌನ್ ನಿಂದಾಗಿ ಹಲವು ಕುಟುಂಬಗಳು ತೀರಾ ಸಂಕಷ್ಟದಲ್ಲಿದ್ದು. ಅಂತಹ ಹಲವಾರು ಕುಟುಂಬಗಳನ್ನ ಅವರ ಸ್ನೇಹಿತರ ಸಹಕಾರದೊಂದಿಗೆ ಪತ್ತೆ ಹಚ್ಚಿ. ಅಂತಹ ಸಂಕಷ್ಟದ ಕುಟುಂಬಗಳಿಗೆ ಅವರು ಆಹಾರ ಸಾಮಾಗ್ರಿಗಳ ಕಿಟ್ ನೀಡುವ ಮೂಲಕ ನೆರವಾಗಿದ್ದಾರೆ. ಇತ್ತೀಚೆಗಷ್ಟೆ ಸದಸ್ಯರಾದ ಶುಕೂರ್ ರವರು ತಮ್ಮ ಆತ್ಮೀಯ ಗೆಳೆಯ ರೊಂದಿಗೆ ಸೇರಿ ರಂಜಾನ್ ಹಬ್ಬದ ಪ್ರಯುಕ್ತ ಹಲವು ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಅವರ ಆತ್ಮೀಯ ಗೆಳೆಯರಾದ ಇಬಾದತ್ ಉಲ್ಲಾ,ಜಬೀ,ಮುನ್ನ, ಯಾಕೋಬ್, ಮುಜಮಿಲ್,ಹನ್ನನ್,ಹಿಬ್ಜ್ ಜೂ,ನೂರ್, ನೌಮನೂ, ಶಾಕ್ ಷಾ ಬೈ,ಜಿಲಾನ್ ಬೈ,ಶಬ್ಬೀರ್, ಇಬ್ರಾಹಿಂ,ಚಂದು ಬೈ, ಇಸ್ಮಾಯಿಲ್, ಸೈಯದ್ ಹುಸೇನ್, ಅಬ್ದುಲ್ ಬಾಕಿ,ಕಲೀಮ್, ಮೌಲಾ, ಹೊನ್ನೂರ್ ವಲಿ, ಸೈಯದ್ ಅಬ್ರಾರ್,ಸೈಯದ್ ಭಾಷಿದ್, ಸುಮಾಮ್ ಸೇರಿದಂತೆ ಮತ್ತಿತರರು ಇದ್ದರು.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030