ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಮುಖ್ಯರಸ್ತೆಯ ಗಾಯಿತ್ರಿ ಶಾಲೆ ಮುಂಭಾಗದಲ್ಲಿ ಗಂಡು ಭ್ರೂಣವೊಂದನ್ನು ದುರುಳರು ಹಾಡಹಗಲೇ ಬಿಸಾಡಿ ಹೋಗಿರುವ ಅವಮಾನವೀಯ ಘಟನೆ ಕಂಡುಬಂದಿದೆ. ಸುಮಾರು ನಾಲ್ಕೈದು ತಿಂಗಳು ಇರುವ ಭ್ರೂಣವು ಪರಿಪೂರ್ಣವಾಗಿದ್ದು ಕೈಕಾಲು ಮುಖ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಹುಷಃ ಲಿಂಗ ಪತ್ತೆಯಾದ ನಂತರವೋ ಅಥವಾ ಈ ಮಗು ಬೇಡ ಎನ್ನುವ ದುರುದ್ದೇಶವೋ ಗೊತ್ತಿಲ್ಲ ತಾಯಿ ಗರ್ಭದಲ್ಲಿ ಒಂಬತ್ತು ತಿಂಗಳು ಜೀವಿಸಬೇಕಿದ್ದ ಮಗುವು ಹೆತ್ತವರ ದುಷ್ಕೃತ್ಯದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಾಗಿ ಅವಧಿಗೂ ಮುನ್ನವೇ ತಾಯಿಯ ಗರ್ಭದಿಂದ ಹೊರಬಂದು ಬೀದಿಯಲ್ಲಿ ಅನಾಥವಾಗಿ ಬಿದ್ದಿದೆ. ಸಾರ್ವಜನಿಕ ಆಸ್ಪತ್ರೆಯ ಸಮೀಪದಲ್ಲಿಯೇ ಭ್ರೂಣ ರಸ್ತೆಯಲ್ಲಿ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಸ್ತೆಯಲ್ಲಿ ಬಿದ್ದ ಭ್ರೂಣವನ್ನು ಕಾಗೆಗಳು ಕುಕ್ಕಿ ತಿನ್ನುವುದನ್ನು ನೋಡಿ ಸ್ಥಳೀಯರು ಪಟ್ಟಣ ಪಂಚಾಯಿತಿಗೆ ಮಾಹಿತಿ ತಿಳಿಸಿದ್ದಾರೆ…
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030