ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ ಆವರಣದಲ್ಲಿ ಇಂದು (ಜೂ,19) ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಹುಟ್ಟುಹಬ್ಬದ ಅಂಗವಾಗಿ ಮೊಳಕಾಲ್ಮುರು ಯುವ ಕಾಂಗ್ರೆಸ್ ವತಿಯಿಂದ ಪೌರಾಕಾರ್ಮಿಕರಿ ಅಭಿನಂದನಾ ಕಾರ್ಯಕ್ರಮ ಮತ್ತು ಮಾಸ್ಕ್ ಸ್ಯಾನಿ ಟೈಜರ್ ವಿತರಿಸಲಾಯಿತು. ಕೊರೊನಾ ಮಹಾಮಾರಿ ಅಬ್ಬರಿಸುತ್ತಿರುವುದರ ಮಧ್ಯೆ ತಮ್ಮ ಕುಟುಂಬ
ಗಳನ್ನು ಬಿಟ್ಟು ಪಟ್ಟಣದ ಸ್ವಚ್ಚತೆ ಕಾಪಾಡುವಲ್ಲಿ ಅವಿರತಾ ಶ್ರಮಿಸುರುವ ಪೌರಕಾರ್ಮಿಕರಿಗೆ ಸದಾ ನಮ್ಮ ಮೆಚ್ಚುಗೆ ಇರುತ್ತದೆ. ಅಧ್ಯಕ್ಷತೆ ವಹಿಸಿದ್ದ ಜನಪ್ರಿಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಡಾ ದಾದಪೀರ್ ಎನ್ ಕೆ, ತಿಳಿಸಿದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಯವರ ಹುಟ್ಟುಹಬ್ಬದ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿ ಸುವುದರ ಜೊತೆಗೆ ಸ್ಯಾನಿಟೈಜರ್, ಫೇಸ್ ಮಾಸ್ಕ್, ಗೌಸ್ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯಧರ್ಶಿ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯರಾದ ಅಬ್ದುಲ್, ಒಬಣ್ಣ, ಗೋಪಾಲ, ನಬಿಲ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು, ಯುವ ಕಾಂಗ್ರೆಸ್ ಉಪಾಧ್ಯಕ್ಷ ದರ್ಶನ್, ಪ್ರದಾನ ಕಾರ್ಯದರ್ಶಿಗಳಾದ ಮಹಾಬುಬ್ ಬಾಷ, ದಿವಾಕರ್, ಒಬಣ್ಣ, ಮಾಲೀಕ್ ಜಾಪರ್, ವಸಿ ವುಲ್ಲಾ, ಜಿಯಾವುಲ್ಲಾ, ಕಿರಣ್ ವಾಂಜ್ರೆ, ಬಾಲ ಚೌಡಪ್ಪ, ರಫ್ಹಿ ವುಲ್ಲಾ, ಚಂದ್ರಣ್ಣ, ಮಹೇಂದ್ರ, ದುರುಗಪ್ಪ, ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು..
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030