ಅಂಬಾದಾಸ ಕಾಮೂರ್ತಿ ನಾಮಪತ್ರ ಸಲ್ಲಿಕೆ
ರಬಕವಿ-ಬನಹಟ್ಟಿ:ತೇರದಾಳ ವಿಧಾನಸಭಾ ಮತಕ್ಷೇತ್ರದ ಪಕ್ಷೇತ್ರ ಅಭ್ಯರ್ಥಿಯಾಗಿ ನೇಕಾರ ನಾಯಕ ಕುರುಹೀನಶೆಟ್ಟಿ ಮಹಾಸಭಾ ರಾಜಾಧ್ಯಕ್ಷ ಅಂಭಾದಾಸ ಕಾಮೂರ್ತಿ ಮೆರವಣಿಗೆ ಮೂಲಕ ಸಾವಿರಾರು ಬೆಂಬಲಿಗರೊಂದಿಗೆ ತಹಸಿಲ್ದಾರ ಕಛೇರಿಗೆ ಆಗಮಿಸಿ ಕುಟುಂಬ ಸದಸ್ಯರ ಸಮ್ಮುಕದಲ್ಲಿ ತಮ್ಮ ಅಧಿಕೃತ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿ ಮಾತನಾಡಿ ನೇಕಾರ ಸಮುದಾಯ ತೇರದಾಳ ಮತಕ್ಷೇತ್ರದಲ್ಲಿ ಹೆಚ್ಚಿರುವುದರಿಂದ ಹುಬ್ಬಳ್ಳಿಯ ಕುರುಹೀನಶೆಟ್ಟಿ ವೀರಭಿಕ್ಷಾವೃತಿ ಮಠದ ಪಿಠಾಧ್ಯಾಕ್ಷರಾಗಿದ್ದ ಶಿವಶಂಕರ ಮಹಾ ಸ್ವಾಮಿಜಿಯ ಮಾರ್ಗದರ್ಶನದಂತೆ ಅವರ ಆಶೀರ್ವಾದ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿರುವುದಾಗಿ ತಿಳಿಸಿದರು. ಆದರೆ ಇವತ್ತು ಶಿವಶಂಕರ ಸ್ವಾಮೀಜಿ ಅವರೆ ಪಕ್ಷೇತ್ರವಾಗಿ ನಾಮಪತ್ರ ಸಲ್ಲಿಸಿರುವುದು ನಿರೀಕ್ಷೆ ಇರಲಿಲ್ಲ ಆದರೆ ಇದು ದುಃಖ ಸಂಗತಿ ಎಂದು ತಮ್ಮ ಮನಸಿನ ಮಾತನ್ನು ಹೊರ ಹಾಕಿದರು. ತೇರದಾಳ ಮತಕ್ಷೇತ್ರದಿಂದ ಚುನಾವಣೆಯಲ್ಲಿ ಹಿಂದೆ ಸರಿಯುವ ಮಾತೆ ಇಲ್ಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಶಿಕಾಂತ ಬಂಡಿವಡ್ಡರ,ಶಿವಕುಮಾರ್ ಕುಳ್ಳೊಳ್ಳಿ ಹಾಗೂ ಬೆಂಬಲಿಗರು ಕಾರ್ಯಕರ್ತರು ಉಪಸ್ಥತರಿದ್ದರು
ವರದಿ.
ಬಸವರಾಜ ನಂದೆಪ್ಪನವರ
ರಬಕವಿ-ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030