ಒಗ್ಗಟ್ಟಾಗಿ ಬಂದು ನಾಮಪತ್ರ ಸಲ್ಲಿಸಿದ ಡಾ. ಎ.ಆರ್.ಬೆಳಗಲಿ ಮತ್ತು ಡಾ.ನಾಡಗೌಡ
ರಬಕವಿ-ಬನಹಟ್ಟಿ: ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದೆ ವಂಚಿತರಾದ ಡಾ.ಎ.ಆರ್.ಬೆಳಗಲಿ ಹಾಗೂ ಪದ್ಮಜೀತ ನಾಡಗೌಡ ತಮ್ಮ ಬೆಂಬಲಿಗರೊಂದಿಗೆ ಬನಹಟ್ಟಿ ನಗರದ ಸ್ಪಿನ್ನಿಂಗ್ ಮಿಲ್ ದಿಂದ ಪಾದಯಾತ್ರೆ ಮೂಲಕ ಜೋಡೆತ್ತುಗಳ ರೀತಿಯಲ್ಲಿ ತಹಸಿಲ್ದಾರ ಕಛೇರಿಗೆ ತೆರಳಿ ಪಕ್ಷೇತ್ರ ಅಭ್ಯರ್ಥಿಯಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ರಾಷ್ಟ್ರೀಯ ಪಕ್ಷ ಕಡೆಗಣಿಸಿದರೂ ವ್ಯಕ್ತಿಗಳ ಅಭಿಮಾನ ಮತದಾರರ ಜನಮನದಲ್ಲಿ ಗಾಢವಾಗಿ ಬೇರು ಬಿಟ್ಟಿರುವುದು ಮೆರವಣಿಗೆಯಲ್ಲಿ ಪಾಲ್ಗೊಂಡ ಬೆಂಬಲಿಗರು ಸಾಕ್ಷಿಯಾಯಿತು. ನಾಮಪತ್ರ ಸಲ್ಲಿಸಿ ಮಾತನಾಡಿದ ಡಾ.ಪದ್ಮಜೀತ ನಾಡಗೌಡ ಈಗಾಗಲೇ ಇರ್ವರು ಸಹ ನಾಮಪತ್ರ ಸಲ್ಲಿಸಿದ್ದು ಹಿಂಪಡೆಯುವ ಕೊನೆಯ ದಿನದವರೆಗೆ ಚರ್ಚಿಸಿ ಇರ್ವರಲ್ಲಿ ಒಬ್ಬರು ನಾಮಪತ್ರ ಹಿಂಪಡೆದು ಚುನಾವಣೆಯಲ್ಲಿ ಒಬ್ಬರು ಸ್ಪರ್ಧಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಎಸ್.ಎಮ್.ಉಳ್ಳೆಗಡ್ಡಿ,ಶಂಕರ್ ಸೊರಗಾಂವಿ,ಪ್ರವೀಣ್ ನಾಡಗೌಡ,ರಾಜು ನಂದೆಪ್ಪನವರ,ರವಿ ಜಂಬಗಿ ಇನ್ನು ಅನೇಕ ನಾಯಕರು ಬೆಂಬಲಿಗ ಕಾರ್ಯಕರ್ತರು ಉಪಸ್ಥತರಿದ್ದರು.
ವರದಿ.
ಬಸವರಾಜ ನಂದೆಪ್ಪನವರ
ರಬಕವಿ-ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030