ಯಶಸ್ವಿಯಾದ ಪತ್ರಕರ್ತರ ಸರ್ವ ಸದಸ್ಯರ ಸಭೆ:-ಇಂದು ಬೆಳಿಗ್ಗೆ 11.30 ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಳ್ಳಾರಿ ಜಿಲ್ಲಾ ಘಟಕದ ಸರ್ವಸದಸ್ಯರ ಸಭೆಯು ಬಳ್ಳಾರಿ ನಗರದ ಡಿ.ಸಿ.ಕಛೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ಇವರ ನೇತೃತ್ವ ಹಾಗೂ ಬಳ್ಳಾರಿ ಜಿಲ್ಲಾಧ್ಯಕ್ಷರಾದ ವಿ.ಜಗನ್ಮೋಹನರೆಡ್ಡಿ ಇವರ ಅಧ್ಯಕ್ಷತೆಯಲ್ಲಿ ನಡೆದಂತ ಈ ಸಭೆಗೆ ಬಳ್ಳಾರಿ ನಗರ,ಸಿರುಗುಪ್ಪ ತಾಲೂಕು,ಕುರುಗೋಡು ತಾಲೂಕು,ಕಂಪ್ಲಿ ತಾಲೂಕು,ಸಂಡೂರು ತಾಲೂಕಿನ ಪತ್ರಕರ್ತ ಸದಸ್ಯರು ಆಗಮಿಸಿ ಅನೇಕ ವಿಚಾರಗಳ ಜೊತೆಗೆ ರಾಜ್ಯ ಸಂಘದ ಸರ್ವ ಸದಸ್ಯರ ಸಭೆಯ ಕುರಿತಂತೆ ಹಾಗೂ 36 ನೇ kuwj ರಾಜ್ಯ ಸಮ್ಮೇಳನಕ್ಕೆ ಪ್ರತಿಯೊಬ್ಬ ಸದಸ್ಯರು ಭಾಗವಹಿಸುವುದರ ಮುಖಾಂತರ ಸಮ್ಮೇಳನಕ್ಕೆ ಹೆಚ್ಚಿನ ಮೆರಗನ್ನು ತಂದು ಕೊಡೋಣ ವೆಂದು ಜಿಲ್ಲಾಧ್ಯಕ್ಷರು ಹೇಳಿದರು.ಸಭೆಯ ಕೊನೆಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನರವರಿಗೆ,ಜಿಲ್ಲಾಧ್ಯಕ್ಷರಾದ ಜಗನ್ಮೋಹನರೆಡ್ಡಿಯವರಿಗೂ ಹಾಗೂ ಪ್ರ.ಕಾ.ಮೋಕಾ ಮಲ್ಲಯ್ಯ ನವರಿಗೆ ಎಲ್ಲಾ ಸದಸ್ಯರು ಸೇರಿ ಹೃದಯ ಸ್ಪರ್ಶಿ ಸನ್ಮಾನದ ಮುಖಾಂತರ ಸರ್ವ ಸದಸ್ಯರ ಸಭೆಯು ಮುಕ್ತಾಯಗೊಳಿಸಿದರು.
ವರದಿ.ಎಂ. ಎಲ್. ವೆಂಕಟೇಶ್. ಉಪಸಂಪಾದಕರು. ಎಚ್ಚರಿಕೆ ಕ್ರಾಂತಿಕಾರಿ ಕನ್ನಡ ವಾರಪತ್ರಿಕೆ. ಬಳ್ಳಾರಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030