ವರದಿ. ನ್ಯೂಸ್ ಬ್ಯುರೋ ಎಚ್ಚರಿಕೆ ಕನ್ನಡ ನ್ಯೂಸ್
ಕರೋನಾ ಹೊಡೆತದ ನಡುವೆ ಈ ಬಾರಿಯ ಕೇಂದ್ರ ಬಜೆಟ್ ಇಡೀ ರಾಷ್ಟ್ರದ ಜನ ಆಸೆಗಣ್ಣಿನಿಂದ ನೋಡುತ್ತಾ ನಿಂತವರಿಗೆ ಚಿನ್ನ ಮುಟ್ಟಂಗಿಲ್ಲಾ ಪೆಟ್ರೋಲ್ ಗಾಡಿ ನೋಡಂಗಿಲ್ಲ ಎಣ್ಣೆ ಹೊಡೆಯೋದಿಲ್ಲ ದುಬಾರಿ ನಿರ್ಮಲ ಎಂಬ ಪರಿಸ್ಥಿತಿ ಇವತ್ತು ದೇಶದಲ್ಲಿ ಕಾಣಸಿಗುತ್ತದೆ. ಇಂದು ನಿರ್ಮಲ ಸೀತಾರಾಮನ್ ಮಂಡಿಸಿದ ಮೂರನೇ ಕೇಂದ್ರ ಬಜೆಟ್ ಕೃಷಿ ಕ್ಷೇತ್ರದ ಅಭಿವೃದ್ಧಿಯ ಹೆಸರಿನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಬೇಳೆ, ಚೆನ್ನಾ ಬೇಳೆ, ಪೆಟ್ರೋಲ್, ಚಿನ್ನ, ಸೇಬಿನ ಮೇಲೆ, ಕಲ್ಲಿದ್ದಲು, ಸನ್ ಫ್ಲವರ್ ಆಯಿಲ್ ಹೀಗೆ ಬಡ ಹಾಗೂ ಮಧ್ಯಮ ವರ್ಗದ ಜನರು ಉಪಯೋಗಿಸುವ ಅಗತ್ಯ ವಸ್ತುಗಳ ಮೇಲೆ ಕೃಷಿ tax ವಿಧಿಸಿದೆ ಕೇಂದ್ರ ಸರ್ಕಾರ.
ಇಂಧನ ಮೇಲಿನ ಕೃಷಿ tax ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 2.4 ರೂ ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರಿಗೆ ನಾಲ್ಕು ರೂಪಾಯಿ ಕೃಷಿ ಟ್ಯಾಕ್ಸ್ ವಿಧಿಸಿರುವುದರಿಂದ ಇಂಧನ ಬೆಲೆ ದುಬಾರಿಯಾಗಲು ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ ಎಂದು ರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಇದೇ ರೀತಿಯಾಗಿ ಚಿನ್ನದ ಮೇಲು ಕೃಷಿ tax ಹೆಚ್ಚಿಗೆ ಮಾಡಿರುವುದರಿಂದ ಚಿನ್ನಾಭರಣಗಳನ್ನು ಕೊಳ್ಳುವುದು ಇನ್ನು ಮುಂದೆ ದುಬಾರಿಯಾಗಲಿದೆ ಮಹಿಳೆಯರಂತೂ ಚಿನ್ನ ದುಬಾರಿಯಾಗಿರುವುದರಿಂದ ಇನ್ನಷ್ಟು ಬೆಲೆ ಏರಿಕೆಯಿಂದಾಗಿ ಮಹಿಳೆಯರು ಚಿನ್ನ ಕೊಳ್ಳುವುದು ಕಷ್ಟವಾಗಲಿದೆ.ಮಧ್ಯದ ಮೇಲೆ 100 ಪರ್ಸೆಂಟ್ ಕೃಷಿ ಟ್ಯಾಕ್ಸ್ ವಿಧಿಸಿರುವುದರಿಂದ ಎಣ್ಣೆ ಪ್ರಿಯರಿಗೆ ಇದೊಂದು ಬಿಗ್ shock ಎಂದರೆ ತಪ್ಪಾಗಲಾರದು. ಈಗಾಗಲೇ ರಾಜ್ಯಗಳು ಇಲ್ಲದೆ ಇರುವ ಹಲವು ಟ್ಯಾಕ್ಸ್ ಗಳನ್ನು ವಿಧಿಸಿ ಎಣ್ಣೆ ಪ್ರಿಯರಿಗೆ ನೀಡಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೃಷಿ ಪ್ರಸನ್ನ ಮಧ್ಯದ ಮೇಲೆ 100 ಪರ್ಸೆಂಟ್ ವಿಧಿಸಿರುವುದು ಮದ್ಯಪ್ರಿಯರಿಗೆ ಇದು ತಡೆಯಲಾಗದ ಬಾರ.ಆಪಲ್ ತಿನ್ನಂಗಿಲ್ಲ ಚೆನ್ನ ಮುಟ್ಟಂಗಿಲ್ಲಾ : ತಿನ್ನುವ ಸೇಬಿನ ಮೇಲೂ ಕೂಡ ಕೃಷಿ ಟ್ಯಾಕ್ಸ್ ವಿಧಿಸಿರುವುದು ಹಣಕಾಸು ಸಚಿವರು ಸೇಬನ್ನು ತಿನ್ನುವುದು ಕೇವಲ ಶ್ರೀಮಂತರು ಎಂಬಂತೆ ಭಾವಿಸಿದಂತಿದೆ. ಚನ್ನ ಬಟಾಣಿ ಮೇಲೂ ಕೂಡ ಕೃಷಿ ಟ್ಯಾಕ್ಸ್ ವಿಧಿಸಿರುವುದು ಪಾನಿಪುರಿ ಪ್ರಿಯರಿಗೆ ಇದು ನುಂಗಲಾರದ ತುತ್ತು.
►ಮೊಬೈಲ್ ಬಿಡಿಭಾಗಗಳ ದರ ಶೇ.2.5ರಷ್ಟು ಹೆಚ್ಚಳ
►ಪೆಟ್ರೋಲ್, ಡೀಸೆಲ್, ಕಾಬೂಲ್ ಕಡಲೆ, ಸೇಬು, ಮದ್ಯ, ವಾಹನದ ಬಿಡಿಭಾಗ, ಹುರಿಗಡಲೆ, ಹತ್ತಿ ಸೂರ್ಯಕಾಂತಿ ದುಬಾರಿ
►ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್, ಡೀಸೆಲ್ 4, ಪೆಟ್ರೋಲ್ 2:50 ರೂ. ಏರಿಕೆ
►ಕೆಲವು ಸರಕುಗಳ ಮೇಲೆ ಮೂಲಸೌಕರ್ಯ ಅಭಿವೃದ್ಧಿ ಸೆಸ್
►ಸೋಲಾರ್, ವಾಹನ ಬಿಡಿಭಾಗಗಳು, ಹತ್ತಿ, ರೇಷ್ಮೆ ಮೇಲಿನ ಕಸ್ಟಮ್ ಸುಂಕ ಹೆಚ್ಚಳ.
► ಕೈಗೆಟುಕುವ ಮನೆ ಖರೀದಿಸಲು ಸಿಗುವ 1.5 ಲಕ್ಷ ರೂ. ಸಾಲ ಸೌಲಭ್ಯ ಇನ್ನೂ ಒಂದು ವರ್ಷ ವಿಸ್ತರಣೆ
►ಆದಾಯ ತೆರಿಗೆಯಲ್ಲಿ ಯಾವುದೆ ಬದಲಾವಣೆ ಇಲ್ಲ
►ಕೋವಿಡ್ ಸೆಸ್ ವಿಧಿಸದಿರಲು ನಿರ್ಧಾರ
►ಪಿಂಚಣಿ ಮತ್ತು ಬಡ್ಡಿಯ ರೂಪದ ಆದಾಯ ಮಾತ್ರ ಇರುವ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗಿಲ್ಲ
►ಜಿಎಸ್ ಟಿಯನ್ನು ಇನ್ನಷ್ಟು ಸರಳೀಕರಿಸಲು ಕ್ರಮ
►5 ಕೋಟಿ ವಹಿವಾಟಿನ ಚಾರಿಟೇಬಲ್ ಟ್ರಸ್ಟ್ ಗೆ ತೆರಿಗೆ ವಿನಾಯಿತಿ
►ಅಸಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಪೋರ್ಟಲ್ ಆರಂಭಕ್ಕೆ ಚಿಂತನೆ
►ಒಂದೇ ದೇಶ,ಒಂದೇ ರೇಶನ್ ಕಾರ್ಡ್ ಪರಿಕಲ್ಪನೆ ಜಾರಿಗೆ
►ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ, ಖರೀದಿ ಪ್ರಕ್ರಿಯೆ ಮುಂದುವರಿಕೆ
►ಡಿಜಿಟಲ್ ಪಾವತಿಗಳ ಪ್ರಚಾರಕ್ಕಾಗಿ 1500 ಕೋ.ರೂ.
►ಅಸ್ಸಾಂ ಹಾಗೂ ಬಂಗಾಳದ ಚಹಾ ಕಾರ್ಮಿಕರಿಗೆ 1,500 ಕೋ.ರೂ.
►ಕೃಷಿ ಸಾಲ ಗುರಿಯನ್ನು 16.5 ಲಕ್ಷ ಕೋ.ಗೆ ಹೆಚ್ಚಿಸಲು ವಿತ್ತ ಸಚಿವರ ಪ್ರಸ್ತಾವ
►ಐದು ಪ್ರಮುಖ ಮೀನುಗಾರಿಕೆ ಕೇಂದ್ರಗಳ ಅಭಿವೃದ್ಧಿ ಘೋಷಣೆ
►ರಾಷ್ಟ್ರೀಯ ಶಿಕ್ಷಣ ನೀತಿಯಡಿ 15,000ಕ್ಕೂ ಅಧಿಕ ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸಲು ಚಿಂತನೆ
► ಉಚಿತ ಅಡುಗೆ ಅನಿಲ ಎಲ್ ಪಿಜಿ ಉಜ್ವಲ ಯೋಜನೆಯನ್ನು 1 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ವಿಸ್ತರಣೆ
► ಹಣಕಾಸು ಸಂಸ್ಥೆಗಳ ಅಭಿವೃದ್ದಿಗೆ 20,000 ಕೋ.ರೂ.
► 2021-22ರಲ್ಲಿ ಎಲ್ ಐಸಿಯಲ್ಲಿ ಐಪಿಒ, ಇದಕ್ಕಾಗಿ ಅಗತ್ಯ ತಿದ್ದುಪಡಿ.
►ರೈಲ್ವೆಗಾಗಿ 1,10,055 ಕೋ.ರೂ.ದಾಖಲೆ ಹಣ
►4,378 ನಗರ ಸ್ಥಳೀಯ ಸಂಸ್ಥೆಗಳಿಗೆ 2.87 ಲಕ್ಷ ಕೋಟಿ.ರೂ. ವಿನಿಯೋಗದೊಂದಿಗೆ ‘ಜಲ್ ಜೀವನ್ ಮಿಷನ್’ ಘೋಷಣೆ
► ಪಿಎಂ ಆತ್ಮನಿರ್ಭರ್ ಸ್ವಸ್ತ್ ಭಾರತ್ ಯೋಜನೆಯು 6 ವರ್ಷಗಳಲ್ಲಿ ಸುಮಾರು 64,180 ಕೋಟಿಗಳಷ್ಟು ವಿನಿಯೋಗದೊಂದಿಗೆ ಪ್ರಾರಂಭ: ನಿರ್ಮಲಾ ಸೀತಾರಾಮನ್.
► ರೈಲ್ವೇಗೆ 1.10 ಲಕ್ಷ ಕೋಟಿ ರೂ. ವಿನಿಯೋಗದ ಘೋಷಣೆ. ಇದರಲ್ಲಿ 1.7 ಲಕ್ಷ ಕೋ.ರೂ. ಬಂಡವಾಳ ವೆಚ್ಚವಾಗಿರುತ್ತದೆ.
►ಬೆಂಗಳೂರು ಮೆಟ್ರೋಗೆ 14 ಸಾವಿರ ಕೋ.ರೂ. ಅನುದಾನ
ಬೆಂಗಳೂರಿನಲ್ಲಿ 58 ಕಿ.ಮೀ. ಹೊಸ ಮೆಟ್ರೋ ರೈಲು ಮಾರ್ಗಕ್ಕೆ 14,778 ಕೋ.ರೂ. ಅನುದಾನ ಘೋಷಣೆ
► ಜಮ್ಮು-ಕಾಶ್ಮೀರದಲ್ಲಿ ಗ್ಯಾಸ್ ಪೈಪ್ ಲೈನ್ ಯೋಜನೆ
► ಮುಂದಿನ 3 ವರ್ಷಗಳಲ್ಲಿ ಇನ್ನೂ 100 ನಗರಗಳನ್ನು ಅನಿಲ ವಿತರಣಾ ಜಾಲಕ್ಕೆ ಸೇರ್ಪಡೆ ಮಾಡಲಾಗುವುದು.
►ಸರಕಾರಿ ಬಸ್ ಗಳಿಗೆ ಕೇಂದ್ರ ಸರಕಾರದಿಂದ 18,000 ಕೋ.ರೂ ನೆರವು
►ವಿದ್ಯುತ್ ಕ್ಷೇತ್ರಕ್ಕೆ 3.05 ಲಕ್ಷ ಕೋಟಿ ರೂ. ವಿನಿಯೋಗ
►ಜವಳಿ ಉದ್ಯಮಕ್ಕೆ ಮೆಗಾ ಜವಳಿ ಪಾರ್ಕ್ ಯೋಜನೆ ಘೋಷಣೆ
►17,000 ಗ್ರಾಮೀಣ ಆರೋಗ್ಯ ಕೇಂದ್ರಗಳ ಸ್ಥಾಪನೆ
►ತಮಿಳುನಾಡು, ಕೇರಳ, ಪಶ್ಚಿಮಬಂಗಾಳ ಹಾಗೂ ಅಸ್ಸಾಂ ನಲ್ಲಿ ಹೆದ್ದಾರಿಗಳ ಯೋಜನೆ ಘೋಷಣೆ
►ಪಶ್ಚಿಮಬಂಗಾಳದಲ್ಲಿ 25,000 ಕೋ.ರೂ. ವೆಚ್ಚದ 675 ಕಿ.ಮೀ.ಹೆದ್ದಾರಿ ಕಾಮಗಾರಿ ಘೋಷಣೆ
*ಮೂಲಸೌಕರ್ಯ ಪೈಪ್ ಲೈನ್ ಯೋಜನೆ ಅಡಿ 1 ಲಕ್ಷ ಕೋಟಿ ಮೊತ್ತದ 217 ಯೋಜನೆಗಳು ಪೂರ್ಣಗೊಂಡಿವೆ.
*ಕೋವಿಡ್-19 ಲಸಿಕೆಗಳಿಗೆ 35,000 ಕೋಟಿ ರೂ. ಘೋಷಣೆ
* ದೇಶದ ಮೇಲೆ ಪರಿಣಾಮಬೀರುವ ವಿಪತ್ತುಗಳ ದೃಷ್ಟಿಯಿಂದ ಈ ಬಜೆಟ್ ಅನ್ನು ಹಿಂದೆಂದೂ ಕಂಡು ಕೇಳರಿಯದಂಥ, ವಿಶೇಷ ಸನ್ನಿವೇಶದಲ್ಲಿ ಸಿದ್ಧಪಡಿಸಲಾಗಿದೆ ಎಂದ ನಿರ್ಮಲಾ ಸೀತಾರಾಮನ್
* ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ. ಇನ್ನುಕೆಲವೆ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.
*ಕೋವಿಡ್-19 ಕಾರಣದಿಂದಾಗಿ ಇದೇ ಮೊದಲ ಬಾರಿ ಬಜೆಟ್ ಅನ್ನು ಕಾಗದರಹಿತವಾಗಿ ಮಂಡಿಸಲಾಗುತ್ತಿದೆ. ಬಜೆಟ್ ಪ್ರತಿ ಆನ್ ಲೈನ್ ನಲ್ಲಿ ಹಾಗೂ ಆಯಪ್ ನಲ್ಲಿ ಲಭ್ಯವಾಗಲಿದೆ.
* ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್ ಸಂಸದರಾದ ಜಸ್ಬೀರ್ ಸಿಂಗ್ ಗಿಲ್ ಹಾಗೂ ಗುರ್ಜೀತ್ ಸಿಂಗ್ ಕಪ್ಪು ನಿಲುವಂಗಿ ಧರಿಸಿ ಸಂಸತ್ತಿನೊಳಗೆ ಪ್ರವೇಶಿಸಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030