ವರದಿ. ಬಸವರಾಜ್ ಹಿರೇಮಠ್
ಲಿಂಗಸುಗೂರ
ವೀರಶೈವ ಜಂಗಮ ಸಮಾಜದ ಸಾಧಕರಿಗೆ ಸನ್ಮಾನ
ಲಿಂಗಸುಗೂರಿನ ಈಶ್ವರ ದೇವಸ್ಥಾನದಲ್ಲಿ ವೀರಶೈವ ಜಂಗಮ ಸಮಾಜದ ವಿವಿಧ ಸಾಧಕರಿಗೆ ಸಂಘದ ವತಿಯಿಂದ ರಾಜಕೀಯ ಶೈಕ್ಷಣಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದು ಉನ್ನತಮಟ್ಟಕ್ಕೆ ಏರಿದ ಸಮಾಜದ ಬಾಂಧವರಿಗೆ ತಾಲೂಕಿನ ವೀರಶೈವ ಜಂಗಮ ಸಮಾಜದ ಸಂಘದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶೈಕ್ಷಣಿಕ ಕ್ಷೇತ್ರದಲ್ಲಿ ವಿನಯಕುಮಾರ್ ಗಣಾಚಾರಿ, ಸಂಸ್ಕೃತಿಕ ವಿಭಾಗದಲ್ಲಿ ಗಂಗಾಧರಯ್ಯ ಶಾಸ್ತ್ರಿ ಅರ್ಚಕರು ಇವರಿಗೆ, ವೃತ್ತಿಯಲ್ಲಿ ಗುರು ಸಂಗಯ್ಯ ಗಣಚಾರಿ ಇವರಿಗೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಮರೇಶ ಹಿರೇಮಠ್ ತೋರಣದಿನ್ನಿ ಹಾಗೂ ಚನ್ನಬಸವ ಸ್ವಾಮಿ ಹಿರೇಮಠ ಇವರಿಗೆ ತಾಲೂಕಿನ ಜಂಗಮ ಸಮಾಜದ ವತಿಯಿಂದ ಆತ್ಮೀಯ ಸನ್ಮಾನ ಮಾಡಲಾಯಿತು .ಮತ್ತು ಸಮಾಜದ ಬಾಂಧವರು ಹೆಚ್ಚು ಹೆಚ್ಚು ಕ್ಷೇತ್ರಗಳಲ್ಲಿ ಸಾಧನೆಗೈದು ಸಮಾಜವನ್ನು ಮುಖ್ಯವಾಹಿನಿಗೆ ತರುವಂತೆ ಮುಖಂಡರು ಈ ಸಂದರ್ಭದಲ್ಲಿ ಆಶಿಸಿದರು
ಹಿರಿಯ ಮುಖಂಡರಾದ ಗುಂಡಯ್ಯ ಸೊಪ್ಪಿಮಠ
ನಾಗಯ್ಯ ಸೊಪ್ಪಿಮಠ ಮತ್ತು ಪುರಸಭೆಯ ಸದಸ್ಯರಾದ ಪ್ರಭಯ್ಯ ತಾತ ಹಿರೇಮಠ ವೀರಭದ್ರಯ್ಯ ಹಿರೇಮಠ ಗುಂತಗೋಳ
ಜಗದೀಶ್ ಹಿರೇಮಠ ಮಹೇಶ್ ಹಿರೇಮಠ ಶಶಿಧರ್ ಗ
ಸಂತೋಷ್ ಸೊಪ್ಪಿಮಠ ಗಂಗಾಧರ ಹಿರೇಮಠ ಮತ್ತು ಸಮಾಜದ ಹಿರಿಯ ಮುಖಂಡರು ಮತ್ತು ಯುವ ಮುಖಂಡರು ಸಮಾಜದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030