ದಿನಾಂಕ 10-06-2021 ರಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿಯ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಂಚಾಲಕರಾದ ಶ್ರೀಯುತ ಕಾಡಶೆಟ್ಟಿಹಳ್ಳಿ ಸತೀಶ್ ರವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಮತಿ ರೇಖಾ ಆರ್ ಇವರು ಹೊನ್ನಾಳಿ ತಾಲೂಕಿನ ಸಂಚಾಲಕರಾಗಿ ಮತ್ತು ಸೊರಟೂರು ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಸುಮ ರವರು ಸಹಸಂಚಾಲಕರಾಗಿ ಆಯ್ಕೆ ಯಾಗಿದ್ದರೆ
ಇವರಿಗೆ ತಮ್ಮೆಲ್ಲರ ಪರವಾಗಿ ಹಾಗು SIRD DTC
ಶ್ರೀ ಯುವರಾಜ ಎಂ ಜೆ ಇವರಿಂದ ಹೃತ್ಪೂರ್ವಕ ಧನ್ಯವಾದಗಳು.
ವಿಶೇಷ ಸೂಚನೆ:-
ಈ ಗುಂಪಿನಲ್ಲಿರುವ ಸದಸ್ಯರು ನಿಮ್ಮ ಪಂಚಾಯತಿ ಎಲ್ಲಾ ಸದಸ್ಯರಿಗೆ ತಿಳಿಸಿ ಒಟ್ಟಾಗಿ ಸ್ಥಳಿಯ ಸರ್ಕಾರವಾದ ಗ್ರಾಮ ಪಂಚಾಯಿತಿಯ ಬಲವರ್ಧನೆ ಮತ್ತು ಗ್ರಾಮ ಸ್ವರಾಜ್ಯದ ಆಶಯಗಳನ್ನು ಈಡೇರಿಸಲು ಎಲ್ಲರು ಒಟ್ಟಾಗಿ ಪ್ರಯತ್ನಿಸಬೇಕು…
ವರದಿ. ರೇಖಾ, ಆರ್, ಲಿಂಗಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030