ವರದಿ. ಸಂದೀಪ್ ಸಿ. ಎಂ. ಹೊಳೆ
ಜೆಎಲ್ಆರ್ ಪೆಬ್ರವರಿ 05
ಸ್ಪೋಟಕ ಗೋದಾಮಿಗೆ ಐ.ಜಿ ರವಿ ಭೇಟಿ
ತಾಲೂಕಿನ ತಾಯಿಟೋಣಿ ಗ್ರಾಮದ ಸಮೀಪ ಮೂರು ಗೋದಾಮಿನಲ್ಲಿ ಸಂಗ್ರಹಿಸಿದ ಸ್ಪೋಟಕ ವಸ್ತುವನ್ನು ಐ.ಜಿ ಪಿ ರವಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಕಳದ ತಿಂಗಳು ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಬಾರಿ ಸ್ಪೋಟದ ಹಿನ್ನಲೆ ಈ ಸ್ಥಳ ಪರಿಶೀಲಿಸಿ ಮಾತನಾಡಿದರು ಪ್ರಕರಣ ತನಿಖೆಯ ಹಂತದಲ್ಲಿದೆ ಸತ್ಯಾ ಸತ್ಯೆಯ ನಂತರ ತಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತವೆ ಎಂದು ಮಾದ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೇ ನೀಡಿದರು.
ಈ ಸ್ಥಳದಿಂದ ಸತತ ಎರಡು ವರ್ಷಗಳಿಂದ ಸಿಡಿ ಮದ್ದುಗಳನ್ನು( ಕಲ್ಲು ಕ್ವಾರೆಗೆ ಬಳಸುವ ಸ್ಪೋಟಕ ವಸ್ತುಗಳು) ಇಲ್ಲಿಂದ ಹಲವು ಕಡೆಗಳಲ್ಲಿ ರಾತ್ರೋ ರಾತ್ರಿ ಪೂರೈಸಲಾಗುತ್ತಿದೆ. ಸಿಡಿ ಮದ್ದುಗಳು ಇಲ್ಲಿಯೇ ಸ್ಪೋಟಗೊಂಡಿದ್ದರೆ ಅಕ್ಕಪಕ್ಕದ ಹಳ್ಳಿಗಳೆಲ್ಲ ಸರ್ವನಾಶವಾಗುತ್ತಿದ್ದವು ಇಂತಹ ಕಲಸಗಳಿಗೆ ಸರ್ಕಾರಗಳು ಪರವಾನಿಗೆ ನೀಡುವುದು ನಿಜಕ್ಕೂ ವಿಷಾದನೀಯ ಎಂದು ಚಿಕ್ಕಮಲ್ಲನಹೊಳೆ, ತಾಯಿಟೋಣಿ, ಹುಚ್ಚವ್ವನಹಳ್ಳಿ ಗ್ರಾಮಸ್ಥರು ತಮ್ಮ ಅಳನ್ನು ಎಚ್ಚರಿಕೆಗೆ ನೀಡಿದರು.
ಸ್ಥಳದಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ, ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರದ್ವಜ ಸೇರಿದಂತೆ ಪೋಲಿಸ್ ಇಲಾಖೆಯ ಸಿಬ್ಬಂದಿ ಜೊತೆಗಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030