ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಒನಕೆ ಒಬ್ಬವ್ವನ ತವರೂರು ಗುಡೇಕೋಟೆ ಗ್ರಾಮದಲ್ಲಿ ಹಿರಿಯ ಆಟಗಾರರರು ಹಾಗೂ ವಾಲ್ಮೀಕಿ ಕ್ರಿಕೇಟರ್ಸ್ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್ ನಡೆಸಲಾಯಿತು. ಕೋವಿಡ್ 19 ಮಾಹಾಮಾರಿಯಿಂದ
ಕಳೆದ 2 ವರ್ಷಗಳಿಂದ ಯಾವುದೇ ಟೂರ್ನಮೆಂಟ್ ಆಡದೆ ಕುಳಿತಿದ್ದ ಕೂಡ್ಲಿಗಿ ತಾಲೂಕಿನ ಯುವ ಹಾಗೂ ಹಿರಿಯ ಆಟಗಾರರು ಈ ಟೂರ್ನಮೆಂಟ್ನಲ್ಲಿ 50ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು ವಿಶೇಷ ಸಂಡೂರು ತಾಲೂಕಿನ ನಾಗೇನಹಳ್ಳಿ ಗ್ರಾಮದ ಅಂಗವಿಕಲ ಕ್ರಿಕೆಟ್ ಪಟು ಭಾಗವಹಿಸಿ ಅದ್ಭುತ ಬೌಲಿಂಗ್ ಮಾಡಿ ಕ್ರೀಡಾ ಸ್ಫೂರ್ತಿ ಮೆರೆದು ನೆರೆದಿದ್ದ ಜನರ ಹರ್ಷ ಮತ್ತು ಮೆಚ್ಚುಗೆಗೆ ಪಾತ್ರರಾದರು.
ಫೈನಲ್ ತಲುಪಿ ದ್ವಿತೀಯ ಬಹುಮಾನ ಪಡೆದ ವಾಲ್ಮೀಕಿ ಕ್ರಿಕೇಟ್ರಸ್ ವಿಜಯೋತ್ಸವ ಹರ್ಷದಿಂದ ಕೂಡಿತ್ತು.
ದ್ವಿತೀಯ ಬಹುಮಾನ ಯೂನುಸ್ ಖಾನ್ ಉಪನ್ಯಾಸಕರು ವಿತರಿಸಿದರು.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030