ದಿನಾಂಕ 15/7/2021 ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೌರಿಹಳ್ಳಿ ನಾರಾಯಣಪುರ ಯಲ್ಲಾಪುರ ಗ್ರಾಮಗಳಿಗೆ ಕ್ಷೇತ್ರದ ಜನಪ್ರಿಯ ನಾಯಕಿ ಶ್ರೀಮತಿ ಎಂಪಿ ವೀಣಾ ಮಹಾಂತೇಶ್ , ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಅವರು ಭೇಟಿ ಕೊಟ್ಟು ಕೋವಿಡ್ ಖಾಯಲೆಯಿಂದ ಬಳಲಿದ ಕುಟುಂಬಗಳಿಗೆ ಸಮಾಧಾನ ಸಾಂತ್ವನ ಹೇಳಿದರು ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಸಂತಾಪ ಸೂಚಿಸಿದರು. ನಾವೆಲ್ಲರೂ ಮತ್ತು ಕಾಂಗ್ರೆಸ್ ಪಕ್ಷ ಈ ಸಂಧಿಗ್ದ ಸಮಯದಲ್ಲಿ ತಮ್ಮೊಂದಿಗಿದೆ ಎಂದು ಭರವಸೆ ನೀಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಜೀವಕ್ಕೆ ಹಾನಿಯಾಗಿ ತೊಂದರೆಗೊಳಗಾದ ಬಿಪಿಎಲ್ ಕುಟುಂಬಗಳಿಗೆ ಸರಕಾರದಿಂದ ಬರುವ ಒಂದು ಲಕ್ಷ ರೂಪಾಯಿಗಳ ಪರಿಹಾರದ ಬಗ್ಗೆ ಮಾಹಿತಿ ವಿವರಿಸಿ ಅರ್ಜಿ ಸಲ್ಲಿಸಲು ಮನವಿ ಮಾಡಿಕೊಂಡರು ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಧನ ಮಾಡುವದರ ಮೂಲಕ , ಕಾಂಗ್ರೆಸ ಸಹಾಯ ಹಸ್ತ ಚಾಚಿದರು . ನಿರಂತರವಾಗಿ ಹರಪನಹಳ್ಳಿ ಕ್ಷೇತ್ರದ ಜನರ ಆಶಯಗಳಿಗೆ ಸ್ಪಂದಿಸುತ್ತಿರುವ, ಸದಾ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡಿರುವ ಜನನಾಯಕಿ ಎಂಪಿ ವೀಣಾ ಮಹಾಂತೇಶ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು…
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030