ಹಿರಿದಾದ ಹೃದಯವಂತಿಕೆವುಳ್ಳ CPI ವಿಶ್ವನಾಥ ಹಿರೇಗೌಡರ…!!!

Listen to this article
ಹಿರಿದಾದ ಹೃದಯದ CPI ವಿಶ್ವನಾಥ ಹಿರೇಗೌಡರ..
ಕುಷ್ಟಗಿಯ ಪಿಎಸ್ ಐ ಆಗಿದ್ದ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರದಿಂದ ಒಂದು ಕೋಟಿ ವೆಚ್ಚದಲ್ಲಿ ನಿಡಸೇಸಿ ಕೆರೆಯ ಹೂಳು ತೆಗೆಯುವ,ಕುಷ್ಟಗಿ ತಾಲ್ಲೂಕಿನ ಬಹುತೇಕ ಗ್ರಾಮಗಳನ್ನ ಮದ್ಯ ಮುಕ್ತ ಗ್ರಾಮ ಮಾಡುವ ಸಮಾಜಮುಖಿ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿ ಅಲ್ಲದೆ ಆಹುತಿ, ಜಾನಕಿ,IAS ಬಸಪ್ಪನವರ ಕಿರುಚಿತ್ರ ಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ,ಜೀವಜಲ,ಮಾದಕ-ಮಾರಕ ಧ್ವನಿಸುರುಳಿ ಹೊರತರುವ ಮೂಲಕ ಪಬ್ಲಿಕ್ ಸ್ಟಾರ್ ಆಗಿ ಅಚ್ಚುಮೆಚ್ಚಿನ ಜನಸ್ನೇಹಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಕೊಪ್ಪಳ ಸಿಪಿಆಯ್ ಆಗಿ ಬಡ್ತಿ ಹೊಂದಿರುವ ಅಜಾತ ಶತ್ರು,ಮಂದಸ್ಮಿತ,ಸರಳ ಜೀವಿ ಅಧಿಕಾರಿಗಳು ಶ್ರೀ ವಿಶ್ವನಾಥ ಹಿರೇಗೌಡರ ಸಾಹೇಬರು..

ಮದ್ಯಪಾನ,ಜೂಜಾಟ ಇನ್ನಿತರ ಚಟುವಟಿಕೆಗಳನ್ನು ನಿಯಂತ್ರಣಗೊಳಿಸುತ್ತ ಇದೀಗ ಕಾಲ ಕಿರುಚಿತ್ರ ಕ್ಕೆ ಪ್ರೋತ್ಸಾಹ,ಸಹಕಾರ ನೀಡಿ ಉತ್ತಮ ಸಂದೇಶ ನೀಡಿದ್ದಾರೆ. ಕಿರುಚಿತ್ರ ನೋಡುವ ಪ್ರತಿಯೊಬ್ಬರ ಕಣ್ಣಲ್ಲಿ ಕಣ್ಣೀರು ಜಿನುಗಿ ಹೃದಯಕ್ಕೆ ತಟ್ಟುತ್ತದೆ.ಪಾಂಡು ಕೆ ಎಸ್ ನಿರ್ದೇಶನ,ಕಲಾವಿದರ ಅಭಿನಯ ಮನಮುಟ್ಟುತ್ತದೆ.ಯುವ ಪ್ರತಿಭಾವಂತರಿಗೆ ಬೆನ್ನುತಟ್ಟುವ ಹಿರಿದಾದ ಗುಣ ಇವರದು..

ಗವಿಶ್ರೀಗಳ ನೇತೃತ್ವದಲ್ಲಿ ಪ್ರಾರಂಭವಾಗಿರುವ ಗಿಣಿಗೇರಾ ಕೆರೆಯ ಪುನಶ್ಚೇತನ ಮಹತ್ಕಾರ್ಯದಲ್ಲಿ ವಿಶ್ವನಾಥ ಸರ್ ಅವರ ಸಹಾಯ ಆಸಕ್ತಿ,ಒಂದು ತಿಂಗಳ ವೇತನ ದೇಣಿಗೆ,ಸಂಘಟನೆ,ಜನರನ್ನು ತೊಡಗಿಸಿಕೊಳ್ಳುವಿಕೆ ಜನರ ಪ್ರೀತಿ ಸಂಪಾದಿಸಿವೆ.ಇವರ ಮಾತೆಂದರೆ ಅದು ಎಂಥವರನ್ನು ತಮ್ಮ ಕಡೆಗೆ ಗಮನ ಸೆಳೆಯುತ್ತವೆ.

ತುಂಬಾ ಬಿಡುವಿಲ್ಲದ ಜವಾಬ್ದಾರಿಯುತ ಹುದ್ದೆಯಲ್ಲಿ ಇದ್ದರೂ ಕೂಡ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿಕೆ,ದಕ್ಷ ಸೇವೆ ನೀಡುವುದು ಶ್ಲಾಘನೀಯ‌.ಅನೇಕ ಅಧಿಕಾರಿಗಳಲ್ಲಿ ಇವರು ನಿಜಕ್ಕೂ ವಿಭಿನ್ನವಾಗಿ ನಿಲ್ಲತ್ತಾರೆ.

ಇಂತಹ ಅಧಿಕಾರಿಗಳು ನಮ್ಮ ಕೊಪ್ಪಳ ದಲ್ಲಿ ಇರುವುದು,ಇಂತಹ ಅಧಿಕಾರಿಗಳ ಒಡನಾಟ,ಪ್ರೀತಿ ಪಡೆದ ನಾವೇ ಭಾಗ್ಯಶಾಲಿ.ನಿಮ್ಮ‌ ಜೊತೆಗೆ ಇರುವುದೇ ಹಬ್ಬ ನಮಗೆ.ಹೀಗೆ ಸಾಗಲಿ ತಮ್ಮ ಅನನ್ಯ ಸೇವೆ,ಸಮಾಜಮುಖಿ ಕಾರ್ಯಕ್ಕೆ
ಧನ್ಯವಾದಗಳು ಸರ್..

ವರದಿ. ಮಂಜುನಾಥ್ ದೊಡ್ಡಮನಿ
Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend