ಚಿರಿಬಿ,ಗಂಗಮ್ಮನಹಳ್ಳಿ:ರಸ್ಥೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ…!!!

Listen to this article

ಚಿರಿಬಿ,ಗಂಗಮ್ಮನಹಳ್ಳಿ:ರಸ್ಥೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ- ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಚಿರಿಬಿ ಗ್ರಾಮ ಹಾಗೂ ಗಂಗಮ್ಮನಹಳ್ಳಿ ಗ್ರಾಮಗಳ ರಸ್ತಗಳು,ಎರೆಡೂ ಗ್ರಾಮಗಳ ರಸ್ತಗಳು ಬಹು ಆಳದ ತೆಗ್ಗು ಗುಂಡಿಗಳನ್ನು ಹೊಂದಿದ್ದು.
ವಾಹನ ಮಾತ್ರವಲ್ಲ ನಡೆದಾಡಲೂ ಹರ ಸಾಹಸ ಪಡಬೇಕಿದೆ,ತೆಗ್ಗುಗಳಲ್ಲಿ ನೀರು ತುಂಬಿದ್ದು ಪಾದಾಚಾರಿಗಳೂ ಸಹ ನಡೆದಾಡಲು ಸರ್ಕಸ್ ಮಾಡಬೇಕಿದೆ.ಹತ್ತಾರು ಜನರು ವಾಹನ ಸಮೇತ ತೆಗ್ಗಲ್ಲಿ ಬಿದ್ದು ಗಾಯಗೊಂಡಿದ್ದಾರೆ,ಚಿರಿಬಿ ಹಾಗೂ ಗಂಗಮ್ಮನಹಳ್ಳಿ ಗ್ರಾಮಗಳ ನಡುವಿನ ರಸ್ತೆ.ನೂರರು ಹತ್ತಾರು ತಿಂಗಳು ಗಳಿಂದಲೂ ರಸ್ತೆಗಳು ಮೊಳಗಾತ್ರದ ನೂರಾರು ತೆಗ್ಗು ಬಿದ್ದಿವೆ.ಗಂಗಮ್ಮನಹಳ್ಳಿ ಗ್ರ‌‍‍ಾಮದ ದ್ವಾರ ಭಾಗದಲ್ಲಿ ರಸ್ತೆ ಬೃಹತ್ ಗಾತ್ರದ ತೆಗ್ಗುಬಿದ್ದು,ಮಳೆ ನೀರು ನಿಂತು ಕೆಸರು ಗದ್ದೆಯಾಗಿದ್ದು ನಡೆದಾಡು ಆಗದಂತಹ ದುಸ್ಥಿತಿ ನಿರ್ಮಾಣವಾಗಿದೆ.ಗ್ರಾಮಕ್ಕೆ ಹೊಂದಿಕೊಂಡಿದ್ದು ಕಸ ತ್ಯಾಜ್ಯ ಕೆಸರಲ್ಲಿ ಕೊಳೆತು ದುರ್ನಾಥ ಬೀರುತ್ತಿದೆ,ಸೊಳ್ಳೆಗಳು ಎತೇಚ್ಚವಾಗಿದ್ದು ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿದೆ.ರಸ್ತೆ ನಿರ್ಮಾಣಗೊಂಡು ಕೆಲ ತಿಂಗಳಲ್ಲಿಯೇ ದುಸ್ಥಿತಿ ತಲುಪಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ದುಾರಿದ್ದಾರೆ. ಸಂಬಂಧಿಸಿದಂತೆ ಜವಾಬ್ದಾರಿ ಹೊಂದಿರುವ ಗುತ್ತಿಗೆದಾರರು ರಸ್ತೆ ನಿರ್ವಹಣೆ ಮಾಡಬೇಕಿದ್ದು ಜಬ್ದಾರಿ ತೋರುತಿಲ್ಲ,ಇಲಾಖಾಧಿಕಾರಿಗಳು ಶೀಘ್ರವೇ ರಸ್ತೆ ದುರಸ್ತಿಗೊಳಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರ‍‍ಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ. ನಿರ್ಲಕ್ಷ್ಯ ತೋರಿದ್ದಲ್ಲಿ ಗುತ್ತಿಗೆದಾರರ ವಿರುದ್ಧ ಹಾಗೂ ಇಲಾಖಾಧಿಕಾರಿಗಳ ವಿರುದ್ಧ,ಜಿಲ್ಲಾಧಿಕಾರಿಗಳಲ್ಲಿ ಹಾಗೂ ಎಸಿಬಿಬಿ ಇಲಾಖಾಧಿಕಾರಿಗಳಿಗೆ ಕಳಪೆ ಕಾಮಗಾರಿಯ ವಿರುದ್ಧ ದೂರು ನೀಡಲಾಗುವುದೆಂದು ಚಿರಿಬಿ ಹಾಗೂ ಗಂಗಮ್ಮನಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ..

ವರದಿ. ಬಸಣ್ಣಿ ಬಣವಿಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend