ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯ.!?ಐವತ್ತುಕ್ಕೂ ಹೆಚ್ಚು ಪಂಪ್ ಸೆಟ್ ಮೋಟರ್ ಗಳು ಭಸ್ಮ…!!!

Listen to this article

ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯ.!?ಐವತ್ತುಕ್ಕೂ ಹೆಚ್ಚು ಪಂಪ್ ಸೆಟ್ ಮೋಟರ್ ಗಳು ಭಸ್ಮ.

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ತೂಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ,ಗ್ರಾಮಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಿದ್ಯತ್ ಸರಬರಾಜಾಗಿ ಸುಮಾರು ಐವತ್ತಕ್ಕೂ ಹೆಚ್ಚು.ಪಂಪ್ ಸೆಟ್ ಮೋಟರ್ ಗಳು ಸುಟ್ಟೊರುವುದಾಗಿ.ನೊಂದ ರೈತರು ದೂರಿದ್ದಾರೆ ಮತ್ತು ಜೆಸ್ಕಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ, ಘಟನೆಯು ಉಜ್ಜಿನಿ ವಿದ್ಯುತ್ ಸರಬರಾಜು ಕೇಂದ್ರದ ವ್ಯಾಪ್ತಿಯ ತೂಲಹಳ್ಳಿ ಹಾಗೂ ಹನುಮನಹಳ್ಳಿ ಗ್ರಾಮಗಳಲ್ಲಿ ಜರುಗಿರುವುದಾಗಿ ತಿಳಿದುಬಂದಿದೆ.ಸಂಬಂಧಿಸಿದಂತೆ ಗ್ರಾಮಗಳ ನೊಂದ ರೈತರು ಹೇಳಿಕೆ ನೀಡಿದ್ದು,ಜೆಸ್ಕಾಂ ಇಲಾಖೆಯ ಉಜ್ಜಿನಿ ಶಾಖಾ ಕೇಂದ್ರದ ಅಧಿಕಾರಿಗ ನಿರ್ಲಕ್ಷ್ಯ ಅವಘಡಕ್ಕೆ ಕಾರಣ ಎಂದು ರೈತರು ದೂರಿದ್ದಾರೆ. ಮಳೆಗಾಲದಲ್ಲಿ ಮಳೆರಾಯನ ಅತೀವೃಷ್ಟಿಗೆ ರೈತರು ನಷ್ಟ ಅನುಭವಿಸುತ್ತಿದ್ದಾರೆ,ಉಳಿದಂತೆ ಜೆಸ್ಕಾಂ ಇಲಾಖಾಧಿಕಾರಿಯ ನಿರ್ಲಕ್ಷ್ಯಕ್ಕೆ ಪಂಪ್ ಸೆಟ್ ಗಳು ಸುಟ್ಟು ಭಸ್ಮಗೊಂಡಿವೆ ಈ ಮೂಲಕ ತಮ್ಮನ್ನು ತೀವ್ರ ಸಂಕಷ್ಟಕ್ಕೆ ಈಡುಮಾಡಲಾಗಿದೆ ಎಂದು ನೊಂದ ರೈತರು ಹೇಳಿಕೆ ನೀಡಿದ್ದಾರೆ. ಘಟನೆಗೆ ಮೂಲ ಕಾರಣ ಉಜ್ಜಿನಿ, ಕಾಳಾಪುರ ನಾಗರಕಟ್ಟೆ ಗ್ರಾಮಗಳಿಗೆ ಸಂಪರ್ಕದಲ್ಲಿರುವ ಲೈನಿಗೆ ತೂಲಹಳ್ಳಿ ಲೈನ್ ಜೋಡಣೆ ಮಾಡಿರುವುದೇ ಅನಾವುತಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಗ್ರಾಮಗಳ ಸುತ್ತಮುತ್ತಲಿನ 50 ಕ್ಕೂ ಹೆಚ್ಚು ರೈತರ ಪಂಪ್ ಸೆಟ್ ಮೋಟಾರುಗಳು, ಸುಡಲು ಕಾರಣವಾಗಿದೆ ಎಂದು ಗ್ರಾಪಂ ಸದಸ್ಯ ಕೊಟ್ರೇಶ್ ಮತ್ತು ಕರವೇ ಅಧ್ಯಕ್ಷ ಸೋಮಣ್ಣ,ನೊಂದ ರೈತರು ಆರೋಪಿಸಿದ್ದಾರೆ. ಅತಿ ಶೀಘ್ರವಾಗಿ ತೂಲಹಳ್ಳಿ ಮತ್ತು ಹನುಮನ ಹಳ್ಳಿ ಲೈನ್ ಪ್ರತ್ಯೇಕವಾಗಿಸಿ ಕ್ರಮ ಜರುಗಿಸಬೇಕು,ತಪ್ಪಿತಸ್ಥ ಜೆಸ್ಕಾಂ ಇಲಾಖಾಧಿಕಾರಿ ವಿರುದ್ಧ ಶಿಸ್ಥು ಕ್ರಮ ಜರುಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.ಪಂಪ್ ಸೆಟ್ ಮೋಟರುಗಳು ಸುಟ್ಟು ತೀವ್ರ ಸಂಕಷ್ಟಕ್ಕೀಡಾಗಿರುವ ರೈತರಿಗೆ, ಸೂಕ್ತ ಪರಿಹ‍ರ ಒದಗಿಸಬೇಕೆಂದು ರೈತರು ಈ ಮೂಲಕ ಒತ್ತಾಯಿಸಿದ್ದಾರೆ….

ವರದಿ. ಕೊಟ್ರೇಶ್ ಕೊಗಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend