ಪೂರ್ವಪರ ಯೋಚಿಸದೇ ಮನಸಿಗೆ ಬಂದಂತೆ ಲೌಕಡೌನ್ ಮಾಡಿದ ರಾಜ್ಯಸರ್ಕಾರ- ಎಂ.ಗಂಗಾಧರ…!!!

Listen to this article

ಪೂರ್ವಪರ ಯೋಚಿಸದೇ ಮನಸಿಗೆ ಬಂದಂತೆ ಲೌಕಡೌನ್ ಮಾಡಿದ ರಾಜ್ಯಸರ್ಕಾರ- ಎಂ.ಗಂಗಾಧರ

ಸಿಂಧನೂರು:ಕಾರ್ಮಿಕ ವಿರೋಧಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಅಸಂಘಟಿತ ಕಾರ್ಮಿಕರೆಲ್ಲರೂ ಒಗ್ಗೂಡಿ ಹೋರಾಡಲು ಕರೆ ನೀಡಿದರು. ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಪಡೆಯಲು ಹಾಗೂಅಸಂಖ್ಯಾತ ಕಾರ್ಮಿಕರು ತಮ್ಮ ರಕ್ತ ಹರಿಸಿ ಪಡೆದ 44 ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕೇವಲ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿರುವ ಸರಕಾರಗಳ ಕಾರ್ಮಿಕ ವಿರೋಧಿ ನೀತಿಯನ್ನು ತಾಲೂಕು ಗೌರವ ಅಧ್ಯಕ್ಷರಾದ ಎಮ್ ಗಂಗಾಧರ್ ಅವರ ತೀವ್ರವಾಗಿ ಖಂಡಿಸಿದರು ಸದರಿ 4 ಕಾರ್ಮಿಕ ಸಂಹಿತೆಗಳ ವಿರುದ್ಧ ಸಿಂದೂರು ಲಕ್ಷ್ಮಣ ಹಮಾಲಿ ಸಂಘದ ಕಾರ್ಮಿಕರು ಅಖಿಲ ಭಾರತ ಕಾರ್ಮಿಕರ ಮುಷ್ಕರಗಳು ನಡೆದಾಗ, ಎಲ್ಲರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಕೋವಿಡ್ 3 ನೇ ಅಲೆ ಹೆಸರಿನಲ್ಲಿ ರಾಜ್ಯ ಸರಕಾರ ವಾರದ ಕರ್ಪ್ಯೂ ಮತ್ತು ಲಾಕ್ ಡೌನ್ ವಿಧಿಸಿದ್ದು ಬಡ ಹಾಗೂ ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆದು ಅವರ ಜೀವನಗಳನ್ನು ಸಂಕಷ್ಟಕ್ಕೆ ತಳ್ಳಿದ್ದು, ಪೂರ್ವಾಪರ ಯೋಚಿಸದೆ, ಮನಸಿಗೆ ಬಂದಂತೆ ಬಿಜೆಪಿ ಸರಕಾರ ರಾಜ್ಯಭಾರ ಮಾಡುವುದನ್ನು ಕೈಬಿಟ್ಟು ಕೊರೋನ ಪರಿಹಾರವಾಗಿ ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ 10 ಸಾವಿರ ಪರಿಹಾರ ಧನವನ್ನು ಕೂಡಲೇ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ ಟಿಯುಸಿಐ ವತಿಯಿಂದ ದಿ7 ರಂದು ಲಕ್ಷ್ಮೀಕ್ಯಾಪ್ (ರೌಡಕುಂದಾ) ದಲ್ಲಿ ಸಿಂಧೂರು ಲಕ್ಷ್ಮಣ ಹಮಾಲರ ಸಂಘದ 32 ಸದಸ್ಯರಿಗೆ ಹಮಾಲಿಕಾರ್ಮಿಕರ ಲೈಸೆನ್ಸ್ ವಿತರಣೆ ಮಾಡಿ ಶ್ರಮಜೀವಿ ಹಮಾಲರ ಸಂಘದ ಗೌರವಾಧ್ಯಕ್ಷರಾದ ಎಂ.ಗಂಗಾಧರ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರಮಜೀವಿ ಹಮಾಲರ ಸಂಘ ಟಿಯುಸಿಐ ಸಿಂಧನೂರು ಅಧ್ಯಕ್ಷರಾದ ಮಾಬುಸಾಬ ಬೆಳ್ಳಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರು ನಾಗಪ್ಪ ಉಮಲೂಟಿ, ಕಾರ್ಯದರ್ಶಿ,ಹೆಚ್.ಆರ್.ಹೊಸಮನಿ, ಖಜಾಂಚಿ, ತಿಮ್ಮಣ್ಣ ಯಾದವ ಲಕ್ಷ್ಮೀಕ್ಯಾಂಪ್ (ರೌಡಕುಂದಾ) ಸಿಂಧೂರು ಲಕ್ಷ್ಮಣ ಹಮಾಲಿ ಸಂಘದ ಅಧ್ಯಕ್ಷ ಮಹಾದೇವಪ್ಪಗೌಡ, ಉಪಾಧ್ಯಕ್ಷ ಖಾಸೀಂಸಾಬ, ಹೊನ್ನೂರುಸಾಬ,ಕಾರ್ಯದರ್ಶಿ ಜೀಲಾನಿಸಾಬ, ರಾಮಣ್ಣ, ಚಿದಾನಂದ, ಸೀತಾನಂದ, ಬ್ರಹ್ಮ, ಸುಭಾನ್, ಬಾಕ್ಲಿ, ಅನ್ವರ್ ಪಾಶಾ, ಶಬ್ಬಿರ್, ಖಾಜಾ ಹುಸೇನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend