*ದಿನಾಂಕ 24.5.2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮ*
*ತಾಲೂಕಿನ ಸಿದ್ದಾಪುರ ಗ್ರಾಮದ ದಲಿತ ಮುಖಂಡ ದಲಿತ ಚಿಂತಕ ಎಂ. ಪಕೀರಪ್ಪ ಇವರಿಂದ ಸ್ವಯಂಪ್ರೇರಿತ ಪ್ರತಿಭಟನೆ::::::.* *ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮದ ದಲಿತ ಚಿಂತಕರಾದ ಶ್ರೀ ಎಂ.ಪಕೀರಪ್ಪ ಇವರು ಇಂದು ಬೆಳಿಗ್ಗೆ ಲಾಕ್ ಡೌನ್ ಇರುವ ಕಾರಣ ತಮ್ಮ ಮನೆಯಲ್ಲೇ ವಿನೂತ ಪ್ರತಿಭಟನೆ ಮಾಡಿದರು. ಚಿಕ್ಕಮಂಗಳೂರು ಜಿಲ್ಲೆ ಮೂಡಿಗೆರೆಯ ಗೋಣಿಬೀಡು ಪೊಲೀಸ್ ಠಾಣೆಯ PSI ಅರ್ಜುನ ರವರು ದಲಿತ ಯುವಕ ಪುನೀತ್ ಎಂಬುವರಿಗೆ ಮೂತ್ರ ಕೂಡಿಸಿ ಅಮಾನುಷ್ಯ ಮೇರೆದ ಪ್ರಕರಣವನ್ನು ದಲಿತ ಸಮುದಾಯದ ದ್ವನಿಯಾಗಿ ಖಂಡಿಸಿ PSI ಅರ್ಜುನ್ ವಿರುದ್ಧ ಕಠಿಣ ಕ್ರಮಜರುಗಿಸುವಂತೆ
ಜೈ ಭೀಮ್ ಘೋಷಣೆಯೊಂದಿಗೆ ಅಗ್ರಹಿಸಿದರು.ನಂತರ 21ನೇ ಶತಮಾನದಲ್ಲೂ ಈ ರೀತಿ ಘಟನೆಗಳು ನಡೆಯುವುದು ದಲಿತ ವರ್ಗಕ್ಕೆ ಒಂದು ದುರದೃಷ್ಟಕರ ಸಂಗತಿ. ಈ ರೀತಿ ಯಾರೇ ತಪ್ಪು ಮಾಡಿದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾನೂನು ರೀತಿ ಕ್ರಮ ಜರುಗಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಈ ಮೂಲಕ ಮನವಿ ಮಾಡಿಕೊಂಡರು.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030