ಚಿತ್ರದುರ್ಗ: ಮೊಳಕಾಲ್ಮೂರು/ ತಾಲ್ಲೂಕಿನ ರಾಂಪುರ ಗ್ರಾಮದ ಯುವ ನಾಯಕ ಶ್ರಿ ಎನ್.ವೈ ಚೇತನ್ ರವರ ವತಿಯಿಂದ ರಾಂಪುರದ ಕೆಲ ಬಡ ಜನರಿಗೆ ಹಾಗೂ ಅಲೆಮಾರಿ ಜನಾಂಗದವರಿಗೆ ಆಹಾರ ಧಾನ್ಯಗಳು ರೇಷನ್ ಕಿಟ್ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಬಡವರು, ಅಲೆಮಾರಿಗಳು ಹಸಿವಿನಿಂದ ನರಳಬಾರದು ಎಂದು ಶ್ರೀ ಎನ್.ವೈ ಚೇತನ್ ರವರ ವತಿಯಿಂದ ಆಹಾರ ಧಾನ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು. ಕೊರೋನಾ ಇರುವ ಕಾರಣ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ಗಳನ್ನು ಬಳಕೆ ಮಾಡುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಂಡು ಕೊರೋನಾ ಸಾಂಕ್ರಾಮಿಕ ರೋಗದಿಂದ ದೂರ ಇರಬೇಕೆಂದು ಸಲಹೆ ನೀಡಿದರು. ನಂತರ ನಿಮಗೆ ಏನೇ ಸಮಸ್ಯೆ ಇರಲಿ ನನಿಗೆ ತಿಳಿಸಿ, ನಾವು ಕಂಡಿತವಾಗಿ ನಮ್ಮ ಕಡೆ ಇಂದ ಸಹಾಯ ಮಾಡುವುದಕ್ಕೆ ಸಿದ್ದರಿದೇವೆ ಎಂದು ಹೇಳಿದರು. ಈ ಸಂದರ್ಬದಲ್ಲಿ ಲೋಹಿತ್, ಶಾಫಿ, ಹಾಗೂ ಆಶ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030