ತಾಯಿಯ ಸ್ಮರಣಾರ್ಥ: ಸಾರ್ವಜನಿಕ ಆಸ್ಪತ್ರೆಗೆ ಪ್ಲೋ ಆಕ್ಸೀಜನ್ ಮೀಟರ್ ಗಳ ಕೊಡುಗೆ ನೀಡಿದ ಅಬ್ದುಲ್ ರಹೆಮಾನ್…!!!

Listen to this article

*ತಾಯಿಯ ಸ್ಮರಣಾರ್ಥ: ಸಾರ್ವಜನಿಕ ಆಸ್ಪತ್ರೆಗೆ ಪ್ಲೋ ಆಕ್ಸೀಜನ್ ಮೀಟರ್ ಗಳ ಕೊಡುಗೆ ನೀಡಿದ ಅಬ್ದುಲ್ ರಹೆಮಾನ್*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸ್ನೇಹಿತರ ಬಳಗದಿಂದ ಒಟ್ಟು18ಸಾವಿರ₹ಬೆಲೆಯ 3ಫ್ಲೋ ಆಕ್ಸಿಜನ್ ಮೀಟರ್ ಗಳನ್ನು, ಸಾರ್ವಜನಿಕ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಯಿತು. ಕೂಡ್ಲಿಗಿ ಸ್ನೇಹಿತರ ಬಳಗ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ರು, ತಮ್ಮ ತಾಯಿ ಮೆಹರೂನ್ ಬೀ ರವರ ಸ್ಮರಣಾರ್ಥವಾಗಿ, ತಾಲೂಕ ದಂಡಾಧಿಕಾರಿಗಳಾದ ಅನಿಲ್ ಕುಮಾರ ಸಮ್ಮುಖದಲ್ಲಿ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಷಣ್ಮುಖ ನಾಯ್ಕ ಮತ್ತು ಡಾಕ್ಟರ್ ವಿನಯ್ ಕುಮಾರ್ ಇವರಿಗೆ ಹಸ್ತಾಂತರಿಸಲಾಯಿತು.ಶಾಸಕರ ಆಪ್ತ ಸಹಾಯಕ ಶ್ರೀಕಾಂತ, ಗ್ರ‍ಾಮಲೆಕ್ಕಿಗ ನವೀನಕುಮಾರ, ಸ್ನೇಹಿತರ ಬಳಗ ಫಯಾಜ್, ಅಲ್ತಾಫ್ ಖಾದರ್ ಭಾಷಾ,ಮುನ್ನ ಮತ್ತಿತರರು ಹಾಜರಿದ್ದರು.
ಈ ಸಂದರ್ಭದಲ್ಲಿ
ಅಬ್ದುಲ್ ರಹೆಮಾನ್ ಮಾತನಾಡಿದರು,ತಮ್ಮ ತಾಯಿ ಮೆಹರೂನ್ ಬೀ ರವರು ಕೆಲದಿನಗಳ ಹಿಂದೆಯಷ್ಟೇ ತೀರಿಕೊಂಡಿದ್ದು ಅವರ ಸ್ಮರಣಾರ್ಥವಾಗಿ ಸಮಾಜ ಸೇವಾಮನೋಭಾವದಿಂದ.
ಈ ಕಾರ್ಯವನ್ನು ಮಾಡುತ್ತಿರುವುದಾಗಿ ರಹೆಮಾನ್ ತಿಳಿಸಿದ್ದಾರೆ. ದೇಶದಲ್ಲಿ ಇಂಥಹ ತುರ್ತುಸ್ಥಿತಿ ಎದುರಾದಾಗ ಎಲ್ಲಾ ಸಮಾಜದವರು ಎಲ್ಲಾ ಜನರು ಒಗ್ಗಟ್ಟಾಗಿದ್ದು ಶ್ರಮಿಸಬೇಕಿದೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಶಕ್ತ‍ಿಯನುಸಾರ ಪರಸ್ಪರ ಸಹಕಾರ ಹಾಗೂ ಸೇವಾ ಮನೋಭಾವವನ್ನು ಪ್ರತಿಯೊಬ್ಬರೂ ಹೊಂದಬೇಕಿದೆ, ಎಲ್ಲರೂ ಜಾತಿ ಮಥ ಮಂಥಗಳನ್ನು ಒಗ್ಗಟ್ಟಾಗಿದ್ದು ಕೊರೋನಾ ಎಂಬ ಮಹಾಮಾರಿಯನ್ನು ಓಡಿಸೋಣ. ವಿಶ್ವದಲ್ಲಿ ಶಾಂತಿ ನೆಮ್ಮದಿಯನ್ನು ಕೊಡೆಂದು ಎಲ್ಲರೂ ಭಗವಂತನಲ್ಲಿ ಕೋರೋಣ.
ಮಹಾಮಾರಿಯಿಂದ ನಮ್ಮನ್ನ ರಕ್ಷಿಸಿಕೊಳ್ಳುವುದಕ್ಕೆ ಎಲ್ಲರೂ ಮನೆಯಲ್ಲಿ ಇರೋಣ,ಮತ್ತು ಆರೋಗ್ಯ ಇಲಾಖೆ ನಿಯಮಗಳನ್ನ ಪಾಲಿಸೋಣ ಸರ್ಕಾರದ ಲಾಕ್ ಡೌನ್ ನ್ನು ಗೌರವಿಸಿ ಅನುಸರಿಸೋಣ ಎಂದು ಅಬ್ದುಲ್ ರೆಹಮಾನ್ ನುಡಿದಿದ್ದಾರೆ.

ವರದಿ.ಡಿ. ಎಂ.ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend