ವರದಿ, ಡಿ, ಎಂ, ಈಶ್ವರಪ್ಪ ಸಿದ್ದಾಪುರ
ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ, ಎಂ, ಬಿ, ಅಯ್ಯನಹಳ್ಳಿ ಗ್ರಾಮದಲ್ಲಿ ಅಕಾಲಿಕ ಗುಡುಗು ಸಹಿತ ಮಳೆಗೆ ಗ್ರಾಮದ ಬಳಗೇರು ಪತ್ರೆಪ್ಪ, ವಯಸ್ಸು 39 ಇವರು ಮನೆಯ ಮೇಲಿನ ಬಾದಾಳವನ್ನು ಮುಚ್ಚಲು ಹೋದಾಗ ಸಿಡಿಲಿಗೆ ಸ್ಥಳದಲ್ಲಿಯೇ ಬಲಿಯಾಗಿದ್ದಾರೆ. ಮೃತರಿಗೆ ಹೆಂಡತಿ ಹಾಗೂ ಮಕ್ಕಳಿದ್ದು ಹಾಗೂ ತಂದೆ ತಾಯಿ, ಅಣ್ಣ ತಮ್ಮಂದಿರು ಇದ್ದಾರೆ ಎಂದು ತಿಳಿದುಬಂದಿದೆ ಇವರ ಒಂದು ಸಾವಿಗೆ ಇಡೀ ಕುಟುಂಬಸ್ತರ ಆಕ್ರಂದನ ಮುಗಿಲುಮುಟ್ಟಿದೆ,
ಕ್ಯಾಸನಕೆರೆಯ ಚಿತ್ರಣ..
ಮತ್ತು ತಾಲೂಕಿನ ಕ್ಯಾಸನಕೆರೆಯಲ್ಲಿ ಒಬ್ಬರಿಗೆ, ಸಹಾ ಸಿಡಿಲು ಬಡಿದು ಸ್ಥಳದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ
ನೆಲಬೊಮ್ಮನಹಳ್ಳಿ:ಸಿಡಿಲುಬಡಿದುಬಕುರಿಗಾಯಿಗಳಿಬ್ರು ಮೃತ*-ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಾಹೊಸಹಳ್ಳಿ ಹೋಬಳಿಯ ನೆಲಬೊಮ್ಮನಹಳ್ಳಿ ಗ್ರಾಮದ ಹೊರವಲಯದಲ್ಲಿ, ಕುರಿಗಾಯಿಗಳಿಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.ಮೃತರು ನೆಲಬೊಮ್ಮನಹಳ್ಳಿಯ ಬ್ರಹ್ಮಪ್ಪ(45)ಚಿನ್ನಾಪ್ರಪ್ಪ(40),ಇವರು ಕುರಿಗಳನ್ನು ಮೇಯಿಸಲು ತೆರಳಿದ್ದು ಮಳೆಯಿಂದ ರಕ್ಷಣೆ ಪಡೆಯಲು ಬೇವಿನ ಮರದ ಬುಡದಲ್ಲಿ ನಿಂತಿದ್ದಾಗ. ಸಿಡಿಲು ಬಡಿದಿದೆ ಪರಿಣಾಮ ಇಬ್ಬರೂ ಸ್ಥಳದಳಲ್ಲಿಯೇ ಮೃತಪಟ್ಟಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030