ಕಾನಾಹೊಸಹಳ್ಳಿ ಬಳಿ ಕಾರು ಅಪಘಾತ
ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಾಲಕನನ್ನು ಹೊರತೆಗೆಯಲು ನಾಲ್ಕು ಗಂಟೆಗಳ ಕಾರ್ಯಾಚರಣೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ50 ರಲ್ಲಿ ಬೆಂಗಳೂರಿನಿಂದ ಗಂಗಾವತಿ ಗೆ ಹೊರಟಿದ್ದ ಕಾರಿಗೆ ಬೈಕ್ ಸವಾರನೊಬ್ಬ ಏಕಾಏಕಿ ಅಡ್ಡಬಂದ ಪರಿಣಾಮ ಬೈಕ್ ಸವಾರನನ್ನು ಪ್ರಾಣ ಉಳಿಸಲು ಹೋಗಿ ಕಾರು ಚಾಲಕ ಸುಬ್ರಹ್ಮಣ್ಯ(57) ಹೆದ್ದಾರಿ ಪಕ್ಕದಲ್ಲಿದ್ದ ನಾಮಪಲಕಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ಮದ್ಯದ ನಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಕಾರಿನ ಚಾಲಕ ಹಾಗೂ ಅವನ ಪತ್ನಿ ಪ್ರಯಾಣಿಸುತ್ತಿದ್ದು ಪತ್ನಿ ರಾಧ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕಾರು ಚಾಲಕನ ಕಾಲು ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದು ಚಾಲಕನನ್ನು ಹೊರತೆಗೆಯಲು ಹೆದ್ದಾರಿ ಸಹಾಯಕರು ಹಾಗೂ ಕಾನಾಹೊಸಹಳ್ಳಿ ಯ ಪೊಲೀಸರು ಸ್ಥಳೀಯರ ನೆರವನಿಂದಿಗೆ ಎರಡು ಗಂಟೆ ಪ್ರಯತ್ನ ಪಟ್ಟರೂ ಆಗಲಿಲ್ಲ ಕೊನೆಗೆ ಕೂಡ್ಲಿಗಿ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಕಾರ್ಯಾಚರಣೆ ಮಾಡಿ ಸತತವಾಗಿ ನಾಲ್ಕು ಗಂಟೆಗಳ ಕಾರ್ಯಚರಣೆಯ ನಂತರ ಚಾಲಕನನ್ನು ಕಾರಿನಿಂದ ಹೊರತೆಗೆಯಲಾಯಿತು. ಕಾರ್ಯಚರಣೆಯವೇಳೆ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿದ್ದು ನೂರಾರು ಜನ ನೆರೆದಿದ್ದು ಸಾರ್ವಜನಿಕರನ್ನು ಕಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು, ಕಾರ್ಯಚರಣೆಯಲ್ಲಿ, ಕಾನಾಹೊಸಹಳ್ಳಿ ಪಿಎಸೈ ಗಳಾದ, ತಿಮ್ಮಣ್ಣ ಚಾಮನೂರು,ನಾಗರತ್ನಮ್ಮ, ಏಎಸೈ ಪ್ರಕಾಶ್, ಹಾಗೂ ಸಿಬ್ಬಂದಿಗಳಾದ ಕಲ್ಲೇಶ್, ಚನ್ನಪ್ಪ, ಸ್ವಾಮಿ, ಇರ್ಶಿಯಾದ್, ಗೃಹರಕ್ಷಕ ದಳದ ಚಂದ್ರಶೇಖರ, ಸೇರಿದಂತೆ, ಅಗ್ನಿಶಾಮಕ ದಳದವರು ಹೆದ್ದಾರಿ ಸಹಾಯಕರು, ಹೆದ್ದಾರಿ ಟೋಲ್ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಜಗಳೂರು ಆಸ್ಪತ್ರೆ ಗೆ ಸೇರಿಸಲಾಯಿತು.
ಕಾನಾಹೊಸಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ50 ರಲ್ಲಿ ಕಾರು ಅಪಘಾತ ಆಗಿರುವುದು.
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030