ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಿ…!!!

Listen to this article

ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದಿಂದ ಚಿತ್ರದುರ್ಗಕ್ಕೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡು ದಿನ ನಿತ್ಯಚಿತ್ರದುರ್ಗಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದಾರೆ,ಆದರೆ ಇವರಿಗೆ ಸರಿಯಾದ ಬಸ್ಸಿನ ವ್ಯವಸ್ಥೆಯಿಲ್ಲ,ಬೆಳಗಿನ ಜಾವ 9ಗಂಟೆಗೆ ಕಾಲೇಜ್ ಇರುವುದರಿಂದ, ಹೊಸಹಳ್ಳಿ ಯಿಂದ ಚಿತ್ರದುರ್ಗಕ್ಕೆ ಹೋಗಲು ಬಸ್ಸಿನ ವ್ಯವಸ್ಥೆ ಇರುವುದಿಲ್ಲ, 7.30 ಕ್ಕೆ ಬಸ್ಸಿನ ವ್ಯವಸ್ಥೆ ಇದ್ದರೆ ಮಾತ್ರ ಕಾಲೇಜಿಗೆ ಹೋಗಲು ಸಾಧ್ಯ, ಬೆಳಗ್ಗೆ 7.30 ಕ್ಕೆ ಐರಾವತ ಬಸ್ ಕಾನಹೊಸಹಳ್ಳಿ ಬರುತ್ತದೆ, ಆದರೆ ವಿದ್ಯಾರ್ಥಿಗಳ ಪಾಸಗೆ ಈ ಬಸ್ಸಿನಲ್ಲಿಅನುಮತಿ ಇರುವುದಿಲ್ಲ,. ಈ ಹಿಂದೆ ಸಂಡೂರು ಘಟಕದಿಂದ ಬಸ್ಸಿನ ಸೌಲಭ್ಯವಿತ್ತು, ಸರಿಯಾದ ಸಮಯಕ್ಕೆ ನಾವುಚಿತ್ರದುರ್ಗಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈಗ ಇದು ಕೂಡ,ಬರುವುದಿಲ್ಲ. ಕಾರಣ ಸಂಬಂಧಪಟ್ಟ ಘಟಕ ವ್ಯವಸ್ಥಾಪಕರು ಕೂಡ್ಲಿಗಿಯಿಂದ ಕಾನಹೊಸಹಳ್ಳಿ ಗೆ ಬೆಳಗ್ಗೆ,7-30-ಕ್ಕೆ ಸರಿಯಾಗಿಬಸ್ಸಿನ ವ್ಯವಸ್ಥೆ ಮಾಡಿದರೆ,ಕಾನಹೊಸಹಳ್ಳಿ, ಆಲೂರು,ದೊಣ್ಣೆಹಳ್ಳಿ ಯಿಂದ ಕಾಲೇಜಿನ ಸಮಯ ಒಂಬತ್ತು ಗಂಟೆಗೆಸರಿಯಾಗಿ ಚಿತ್ರದುರ್ಗಕ್ಕೆ ಹೋಗುವ ವಿದ್ಯಾರ್ಥಿಗಳಿಗೆ, ಅನುಕೂಲವಾಗುತ್ತದೆ, ಆದ್ದರಿಂದ ಹೊಸ ಹಳ್ಳಿ,ಹಾಗು ಆ ಲೂರು,ಗ್ರಾಮದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಬಂಧಪಟ್ಟ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿರುತ್ತಾರೆ..

ವರದಿ. ವಿರೇಶ್, ಕೆ, ಎಸ್, ಹೊಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend