ಕಾನಾಮಡುಗು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಗಡಿಗ್ರಾಮಕಾನಾಮಡುಗು ಗ್ರಾಮದ ಆಸುಪಾಸು ಚಿರತೆ ಪ್ರತ್ಯಕ್ಷ
ಗ್ರಾಮದ ಗಾಳಿ ತಿರುಗುವ ಗಮೇಶ ಪ್ಯಾನ್ ನಂ ೬೨ ರ ಬಳಿ ರಾತ್ರಿ ೧೧ ಗಂಟೆ ಸಮಯ ದಲ್ಲಿ ರಾತ್ರಿ ಪಾಳಿ ಕೆಲಸ ಮಾಡುತಿದ್ದ ಇಬ್ಬರು ಕಾವಲುಗಾರರು ಚಿರತೆಯನ್ನು ನೋಡಿ ಹೆದರಿ ಓಡಿ ಕಾನಾ ಮಡು ಗು ಬಸ್ ನಿಲ್ದಾಣ ದಲ್ಲಿ ಇದ್ದು ಬೆಳಿಗ್ಗೆ ಊರಿನ ಜನರಿಗೆ ತಿಳಿಸಿದ್ದಾರೆ. ಬೆಳಿಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ಹೊಸಹಳ್ಳಿಯ ವೆಂಕಟೇಶ್ ರವರು ಚಿರತೆ ಬಂದು ಹೋದ ಸ್ಥಳದಲ್ಲಿ ಹೆಜ್ಜೆಯ ಗುರುತು ಪತ್ತೆ ಮಾಡಿ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು.
ನಂತರ ವೆಂಕಟೇಶ್ ರವರು ಹೊಲಗಳಿಗೆ ಹೋಗುವ ರೈತರಿಗೆ ಚಿರತೆ ಹೋಗಿರುವ ವಿಚಾರವನ್ನು ತಿಳಿಸಿ . ಎಚ್ಚರಿಕೆಯಿಂದ ಇರಲು ಹೇಳಿ ರಾತ್ರಿ ಚಿರತೆ ಹಿಡಿಯುವ ಬೋನ್ ಇಡುತ್ತೇವೆ ಎಂದು ಭರವಸೆ ನೀಡಿದರು…
ವರದಿ. ವಿರೇಶ್, ಕೆ, ಎಸ್, ಹೊಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030