ಮೊಳಕಾಲ್ಮೂರು: ಆಹಾರ ಉತ್ಪನ್ನಗಳ ತಯಾರಿಕೆ ಕುರಿತು ತರಬೇತಿ ಕಾರ್ಯಗಾರ ಸಭೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ಪ್ರೇರಣ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಕೃಷಿ ಇಲಾಖೆ ಆತ್ಮ ಯೋಜನೆಯಡಿ ಆಹಾರ ಉತ್ಪನ್ನಗಳ ತಯಾರಿಕೆ ಕುರಿತು ತರಬೇತಿ ಕಾರ್ಯಗಾರ ಕೊಂಡ್ಲಹಳ್ಳಿ ಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರೇರಣಾ ಶಿಕ್ಷಣ ಸಂಸ್ಥೆ ಪ್ರೇರಣಾ ಸಿದ್ದ ಉಡುಪು ತರಬೇತಿ ಕೇಂದ್ರ ಪ್ರೇರಣಾ ನ್ಯಾಚುರಲ್ ಫುಡ್ ಪ್ರಾಡಕ್ಟ್ಸ್ ಸಂಸ್ಥಾಪಕರಾದ ಕೆ.ಜೆ ಜಯಲಕ್ಷ್ಮಿ ನಾಯಕ್ ಮಾತನಾಡಿ ಬಾಬಾಸಾಹೇಬರ ಆದರ್ಶ ಸಮಾಜದ ನಿರ್ಮಾಣಕ್ಕಾಗಿ ಶೋಷಿತ ಸಮುದಾಯದ ಆರ್ಥಿಕ ಶಿಕ್ಷಣ ಅಭಿವೃದ್ಧಿಗಾಗಿ ಅತ್ಯಂತ ಹಿಂದುಳಿದ ತಾಲೂಕಾದ ಮೊಳಕಾಲ್ಮೂರು ನಲ್ಲಿ 2008ರಲ್ಲಿ ನಿರುದ್ಯೋಗ ಸಮಸ್ಯೆ ನೀಗಿಸಲು ಈ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಸಾವಿರಾರು ಜನಗಳಿಗೆ ಅದರಲ್ಲೂ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ರೂಪಿಸಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಅದೇ ರೀತಿ ನೂರಾರು ಸ್ವಸಹಾಯ ಸಂಘಗಳಿಗೆ ಉಳಿತಾಯದ ಮಹತ್ವ ತಿಳಿಸಿಕೊಟ್ಟು. ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಕೂಡ ಕೊಡಿಸಿದ್ದೇವೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರೇರಣಾ ನ್ಯಾಚುರಲ್ಸ್ ಫುಡ್ ಪ್ರಾಡಕ್ಟ್ಸ್ ಹನ್ನು ಈ ದಿನ ಲೋಕಾರ್ಪಣೆ ಮಾಡಿದ ಹೇಮೇ ನಮಗೆದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಖ್ಯಾತ ಸಾವಯಾವ ತಜ್ಞರಾದ ಶ್ರೀಯುತ ವಿಶ್ವನಾಥ್ ಸಜ್ಜನ್ ಹಾಗೂ ಖ್ಯಾತ ಆಹಾರ ತಜ್ಞರಾದ ಈಶ್ವರನ್ ತೀರ್ಥ ಮತ್ತು ಪ್ರೇರಣಾ ಸಂಸ್ಥೆ ಸಂಸ್ಥಾಪಕ ಕೆ ಜೆ ಜಯಲಕ್ಷ್ಮಿ ಮತ್ತು ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು…
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030