ದಿನಾಂಕ 2/12 /2021 ರಂದು ಬಾಗೇಪಲ್ಲಿ ಪಟ್ಟಣ ತಾಲೂಕು ದಂಡಾಧಿಕಾರಿ ದಿವಾಕರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥಸ್ವಾಮಿ ರವರಿಗೆ,ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ವತಿಯಿಂದ ಬಾಗೇಪಲ್ಲಿ ಕಸಬಾ ಹೋಬಳಿ ಪರಗೋಡು ಗ್ರಾಮ ವ್ಯಾಪ್ತಿ ಬಳಿ ಇರುವ ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ನೆಲೆಸಿ ಸುಮಾರು ವರ್ಷಗಳು ಕಳೆದಿದೆ ,ಈ ದೇವಸ್ಥಾನಕ್ಕೆ ಒಂದು ಇತಿಹಾಸವೂ ಪ್ರಸಿದ್ಧವಾಗಿದೆ, ದೇವಸ್ಥಾನಕ್ಕೆ ದರ್ಶನ ಪಡೆಯಲು ಭಕ್ತಾದಿಗಳು ಪ್ರತಿದಿನ ಆಗಮಿಸುತ್ತಿರುತ್ತಾರೆ ದರ್ಶನ ಪಡೆಯಲು ಮುದುಕರು ,ಯುವಕರು, ಮಹಿಳೆಯರು ,ಗರ್ಭಿಣಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಮುಂತಾದವರು ತಮ್ಮ ಹರಿಕೆಯನ್ನು ಹೊತ್ತುಕೊಂಡು ಬಂದು ಪೂಜೆಯನ್ನು ಸಲ್ಲಿಸುತ್ತಿರುತ್ತಾರೆ ಆದರೆ ಆ ದೇವಸ್ಥಾನಕ್ಕೆ ಹೋಗಲು ರಸ್ತೆ ಮಾತ್ರ ಕೆಸರುಗದ್ದೆ ಮಾಯವಾಗಿದೆ ಅದರಿಂದ ಭಕ್ತಾದಿಗಳು ತುಂಬಾ ನರಕವನ್ನು ಅನುಭವಿಸುತ್ತಿರುತ್ತಾರೆ ದಯಮಾಡಿ ತಾವು ರಸ್ತೆ ಮಾರ್ಗವನ್ನು ಸರಿಪಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮತ್ತು ಸಾರ್ವಜನಿಕರಿಂದ ಮನವಿ ಮಾಡಲಾಗುತ್ತಿದೆ , ಇಲ್ಲದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ತಾಲೂಕು ಅಧ್ಯಕ್ಷರು ಬಿಟಿಸಿ ಸೀನ ,ತಾಲೂಕು ಪ್ರಧಾನ ಕಾರ್ಯದರ್ಶಿ ಜಬಿವುಲ್ಲಾ, ನಿವೃತ್ತ ಪೊಲೀಸ್ ಸಾದಪ್ಪ, ಬಾಬಾ ಫಕ್ರುದ್ದಿನ್, ಸುಬ್ಬರೆಡ್ಡಿ, ಆನಂದ, ನಾರಾಯಣಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷರು ಮಂಜುನಾಥ್ ಮುಂತಾದವರು ಭಾಗವಹಿಸಿದರು…
ವರದಿ. ಎಂ. ಕೆ. ಮೂರ್ತಿ. ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030