ಸಂತ ಶಿಶುನಾಳ ಶರೀಫ ರಾಜ್ಯ ಪ್ರಶಸ್ತಿಗೆ ಕು.ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ ಯವರು ಆಯ್ಕೆ.
ನಮಸ್ಕಾರ
ಯುವ ಸಾಹಿತಿ, ಸಂಘಟಕ ನಿರೂಪಕ,ಯುವ ಚಿಂತಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ರಾಜ್ಯದ ಭಾಗದಲ್ಲಿ ಸಾಹಿತ್ಯತ್ಮಕ ವಾಗಿ ಛಾಪನ್ನು ಮೂಡಿಸಿ ರಾಜ್ಯದ ಅನೇಕ ಪತ್ರಿಕೆಗಳಲ್ಲದೆ ನಮ್ಮ ಪತ್ರಿಕೆಯಲ್ಲಿಯೂ ಬರಹಗಳನ್ನು ಮೂಡಿಸಿ ಬರಹ ಚಿಂತನೆಯಿಂದ ತಮ್ಮನ್ನು ತಾವು ಸಮಾಜದಲ್ಲಿ ಗುರುತಿಸಿಕೊಂಡು ಕಾರ್ಯಕ್ರಮ ನಿರೂಪಣೆಯಲ್ಲಿ ಮನಗೆದ್ದು ಧಾರ್ಮಿಕ,ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ,ಕಾರ್ಯದರ್ಶಿಗಳಾಗಿ,ಸದಸ್ಯರಾಗಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಾ ಕನ್ನಡಮ್ಮನ ಸೇವೆಗೆ ಅಣಿಯಾಗಿ ಸಾಗುತ್ತಿದ್ದಾರೆ.
ಮೂಲತಃ ಈಗಿನ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಪುಟ್ಟ ಹಳ್ಳಿ ಎಂ.ಕಲ್ಲಹಳ್ಳಿಯ ಕಾರ್ತಿಕ್ ಆಚಾರ್. ಪ್ರಸ್ತುತವಾಗಿ ದಾವಣಗೆರೆಯ ಲುಂಬಿನಿ ಪ್ಯಾರಮೆಡಿಕಲ್ ಕಾಲೇಜ್ ಅಂತಿಮ ವರ್ಷದಲ್ಲಿ ವ್ಯಾಸಂಗ ನೆಡೆಸುತ್ತಿದ್ದಾರೆ, ಓದಿನ ಜೊತೆ-ಜೊತೆಗೆ ಧಾರ್ಮಿಕವಾಗಿ ಮತ್ತು ಸಾಹಿತ್ಯಿಕವಾಗಿ ನಿರಂತರವಾಗಿ ಮುನ್ನುಗ್ಗಿ ಸಾಗುತ್ತಿರುವ ಇವರ ಸಾಧನೆಯ ಪಥಕಂಡು ತಾಲೂಕು ಜಿಲ್ಲಾ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಇವರಿಗೆ ಇತ್ತಿಚಿಗೆ ನವೆಂಬರ್೨೮ ರಂದು ಬೆಂಗಳೂರಿನ ವೀರಶೈವ ಲಿಂಗಾಯತ ಭವನದಲ್ಲಿ ನಡೆದ ಹೈಬ್ರಿಡ್ ನ್ಯೂಸ್ ಚಾನಲ್ ಅವರ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ *”ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ”* ಗೆ ಭಾಜನರಾಗಿದ್ದಾರೆ. ಇದಲ್ಲದೆ ‘ಕನ್ನಡ ಸಾಹಿತ್ಯ ಸಾಗರ ಸಂಸ್ಥೆ ರಿ ಚಿತ್ರದುರ್ಗ’ ಇವರಿಂದ ದಿನಾಂಕ ೧೬-೧೨-೨೦೨೧ ರಂದು *ಸಂತ ಶಿಶುನಾಳ ಶರೀಫ ರಾಜ್ಯ ಪ್ರಶಸ್ತಿ* ಗೆ ಆಯ್ಕೆ ಆಗಿದ್ದಾರೆ ಈ ಸಂತಸಕ್ಕೆ ಹಲವಾರು ಸಂಘ ಸಂಸ್ಥೆಗಳು ವೇದಿಕೆಗಳು ಹಿತೈಷಿಗಳು ಶುಭ ಕೋರಿದ್ದಾರೆ..
ಸಾಹಿತ್ಯ,ಕನ್ನಡ ಸೇವೆ ನೀನಗೇನು ನೀಡಿತು ಎನ್ನುವರು ನಮ್ಮೊಡನೆ ಇದ್ದಾರೆ. ಈ ಚಿತ್ರಗಳೇ ಅವರಿಗೆ ಉತ್ತರ ಮುಖದಲ್ಲಿನ ನಗು ಅಲ್ಲಿನ ಸಂತಸ ಗೌರವ ಇದಕ್ಕಿಂತ ವ್ಯಕ್ತಿಗೆ ಬೇರೆ ಬೇಕಿಲ್ಲ.
ಸೇವೆ ಮಾಡಬೇಕು ಅನಂತರ ಗೌರವ ದೊರೆಯುತ್ತವೆ ಎನ್ನುವುದು ಸಾಬೀತಾದಂತಾಯಿತು.
ನಿಮ್ಮ ಏಳ್ಗೆ ನಿಮ್ಮ ಯಶಸ್ಸಿಗೆ ನಿಮ್ಮ ಕನ್ನಡಾಭಿಮಾನವೇ ಕಾರಣ .
ನಿಮ್ಮ ಸಾಧನೆಯ ಹಾದಿ ಹೀಗೆ ಮುಂದುವರಿಯಲೆಂದು ನಮ್ಮ ‘ಎಚ್ಚರಿಕೆ ಪತ್ರಿಕೆಯ’ ಆಶಯ…
ವರದಿ. ಪ್ರಕಾಶ್, ಇಟ್ಟಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030