ವಿಮಾನದಲ್ಲಿ ಜೀವ ಉಳಿಸಿ ಸಮಯ ಪ್ರಜ್ಞೆ ಮೆರೆದ ಡಾ. ನಿರಂತರ್ ಗಣೇಶ್….
ದಿನಾಂಕ 21.06.2023 ರಂದು ಸಮಯ 12 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಹೊರಟ ಇಂಡಿಗೋ ವಿಮಾನದಲ್ಲಿ ರೊಸಮ್ಮ ಎಂಬ 60 ವರ್ಷದ ಮಹಿಳೆ ಪ್ರಯಾಣಿಸುತ್ತಿದ್ದರು, ವಿಮಾನದ ಹಾರಾಟದ ಸಮಯದಲ್ಲಿ ಸುಮಾರು 1.15 ಗಂಟೆಗೆ ಆ ಮಹಿಳೆಗೆ ಅಧಿಕ ರಕ್ತದೊತ್ತಡ, ಮಧುಮೇಹ ದಿಂದ ಇದ್ದಕಿದ್ದ ಹಾಗೆ ಪ್ರಜ್ಞಾಹೀನ ರಾದರು, ಆ ಸಮಯದಲ್ಲಿ ಅದೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಡಾ. ನಿರಂತರ್ ಗಣೇಶ್ ತಕ್ಷಣ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಹೃದಯ ರಕ್ತನಾಳದ ಪುನುರುಜ್ಜಿವನ ಆರಂಬಿಸಿದರು, ತಕ್ಷಣ ಮಹಿಳೆ ಚಿಕಿತ್ಸೆಗೆ ಸ್ಪಂದಿಸಿದರು ನಂತರ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡುವ ಮೂಲಕ ಮಹಿಳೆಯನ್ನು ಆಂಬುಲೆನ್ಸ್ ಮೂಖಾಂತರ ಆಸ್ಪತ್ರೆಗೆ ಸ್ಥಳಾಂತರಿಸಿದರು. ಇಂತಹ ಸಮಯದಲ್ಲಿ ಸಮಯ ಪ್ರಜ್ಞೆ, ವೃತ್ತಿ ಧರ್ಮ, ಸಾಮಾಜಿಕ ಕಳಕಳಿಯನ್ನು ಮೆರೆದ ಡಾ. ನಿರಂತರ್ ಗಣೇಶ್ ರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು…
ವರದಿ. ನ್ಯೂಸ್ ಬ್ಯುರೋ ಎಚ್ಚರಿಕೆ ಕನ್ನಡ ನ್ಯೂಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030