ಕೂಡ್ಲಿಗಿ:ಉಪ ವಿಭಾಗದ 6ಕಡೆಗಳಲ್ಲಿ ಪೊಲೀಸ್ ದಾಳಿ: ಪ್ರಕರಣ ದಾಖಲು…!!!

Listen to this article

ಕೂಡ್ಲಿಗಿ:ಉಪ ವಿಭಾಗದ 6ಕಡೆಗಳಲ್ಲಿ ಪೊಲೀಸ್ ದಾಳಿ: ಪ್ರಕರಣ ದಾಖಲು- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ, ಕೂಡ್ಲಿಗಿ ಉಪವಿಭಾಗದ ವ್ಯಾಪ್ತಿಯ ಐದು ಕಡೆಗಳಲ್ಲಿ. ಆ8ರಂದು ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಮಟ್ಕ‍ಾ ಜೂಜಾಟ ನಡೆಸುತ್ತಿದ್ದರ, ಖಚಿತ ಮಾಹಿತಿಯನ್ನಾಧರಿಸಿ ಡಿ.ವೈ.ಎಸ್ಪಿ ಮಲ್ಲೇಶಪ್ಪ ವಿ ಮಲ್ಲ‍ಾಪುರ ರವರ ನಿರ್ಧೇಶನದಂತೆ. ಪೊಲೀಸರು ದಾಳಿ ಮಾಡಿರುವ ಹಿನ್ನಲೆಯಲ್ಲಿ, ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕೂಡ್ಲಿಗಿ ಉಪವಿಭಾಗದಲ್ಲಿ ಒಟ್ಟು 6 ಪ್ರಕರಣಗಳು ದಾಖಲ‍ಾಗಿದ್ದು, ಆರೋಪಿಗಳನ್ನು ಬಂಧಿಸಿದ್ದು ಸಾಮಾಗ್ರಿಗಳೊಂದಿಗೆ ‍ಅರೋಪಿಗಳನ್ನು ಬಂಧಿಸಲಾಗಿದೆ. ಹಾಗೂ ಜೂಜಿಗೆ ಬಳಸಿದ್ದ ಸಾಮಾಗ್ರಿಗಳು ಮತ್ತು ಅವರಿಂದ ಒಟ್ಟು 6855ರೂ ವಶಪಡಿಸಿಕೊಂಡಿರುವುದರ ಕುರಿತು. ಕೂಡ್ಲಿಗಿ ಉಪವಿಭಾಗದ ಪೊಲಿಸ್ ಅಧಿಕಾರಿ, ಮಲ್ಲೇಶಪ್ಪ ವಿ ಮಲ್ಲಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *ಕೂಡ್ಲಿಗಿ*- ಕೂಡ್ಲಿಗಿ ಪಟ್ಟಣದ ಠಾಣೆಯ ಸರಹದ್ದಿನ ಎಡಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಹತ್ತಿರ,ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಜರುಗುತ್ತಿರುವ ಸಂದರ್ಭದಲ್ಲಿ. ಪಿಎಸೈ ಧನುಂಜಯ ಕುಮಾರ ನೇತೃತ್ವದಲ್ಲಿ, ಕೂಡ್ಲಿಗಿ ಪೊಲೀಸರು ದಾಳಿ ನಡೆಸಿದ್ದು. ಒರ್ವ ಆರೋಪಿ ಹಾಗೂ ಅವನಿಂದ 480₹ ನಗದು,ಮತ್ತು ಮಟ್ಕಾ ಸಾಮಾಗ್ರಿಗಳನ್ನು ಒಶಕ್ಕೆ ಪಡೆದಿದ್ದು, ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. *ಕೊಟ್ಟೂರು*- ಕೊಟ್ಟೂರು ಪೊಲೀಸ್ ಠಾಣೆ ಸರಹದ್ದಿನ ಚಿರಬಿ ಗ್ರಾಮದ , ರಾಘವೇಂದ್ರ ಎಂಬುವರ ಅಂಗಡಿಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ.ಮಟ್ಕಾ ಜೂಜಾಟ ಜರುಗುತ್ತಿರುವ ಖಚಿತ ಮಾಹಿತಿಯನ್ನಾಧರಿಸಿ, ಕೆೊಟ್ಟೂರು ಪೊಲೀಸರು ಪಿಎಸೈ ಗೀತಾಂಜಲಿ ಶಿಂಧೆರವರ ನೇತೃತ್ವದಲ್ಲಿ. ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನ ಹಾಗೂ ಜಾಜಾಟದ ಸಾಮಾಗ್ರಿಗಳನ್ನು ಮತ್ತು ನಗದು720₹ಗಳ ನಗದು ಹಣ ಜಪ್ತಿ ಮಾಡ‍ಲಾಗಿದೆ. ಇದೇ ರೀತಿಯ‍ಾಗಿ ದೂಪದಹಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಮಟ್ಕ‍‍ಾ ಜೂಜಾಟದಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನ ಒಶಕ್ಕೆ ಪಡೆದಿದ್ದು. ಹಾಗೂ ಆತನಿಂದ ಜೂಜಾಟಕ್ಕೆ ಬಳಸಿದ್ದ ಸಾಮಾಗ್ರಿಗಳು ಹ‍ಾಗೂ 900₹ನಗದು ಹಣ ಒಶಕ್ಕೆ ಪಡೆದು ಪ್ರಕಣ ದಾಖಲಿಸಲ‍‍ಾಗಿದೆ. *ಹಗರಿಬೊಮ್ಮನಹಳ್ಳಿ*- ಹಗರಿಬೊಮ್ಮನಹಳ್ಳಿ ಪೊಲಿಸ್ ಠಾಣಾ ಸರಹದ್ದಿನ ಪಟ್ಟಣ ಅಂಚಿನಲ್ಲಿ, ಎಸ್.ಬಿ.ಐ.ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ. ರಸ್ತೆಯ ಪಕ್ಕ ಫುಟ್ಬಾತ್ ನಲ್ಲಿ, ಮಟ್ಕ‍ ಜೂಜಾಟ ಜರುಗುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನ‍ಧರಿಸಿ. ಹಗರಿಬೊಮ್ಮನಹಳ್ಳಿ ಪೊಲೀಸರು ಮಹಿಳಾ ಪಿಎಸೈ ಸರಳಾರವರ, ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿಯನ್ನು ಬಂಧಿಸಿದ್ದು, ಮಟ್ಕ‍ಾ ಸಾಮಾಗ್ರಿ ಹ‍ಾಗೂ ಆತನಿಂದ 2169₹ನಗದು ಹಣ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. *ಮರಿಯಮ್ಮನಹಳ್ಳಿ*-ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ, ಗುಂಡ‍ಾ ಗ್ರಾಮದ ಶ್ರೀಆಂಜನೇಯ ದೇವಸ್ಥಾನದ ಹತ್ತಿರ. ಸಾರ್ವಜನಿಕ ಸ್ಥಳದಲ್ಲಿ ಮಟ್ಕ‍ಾ ಜೂಜ‍ಟ ಜರುಗುತ್ತಿರುವ ಖಚಿತ ಮಾಹಿತಯನ್ನಾಧರಿಸಿ, ಮರಿಯಮ್ಮನಹಳ್ಳಿ ಪೊಲೀಸರು ಪಿಎಸೈ ಮೌನೇಶರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆರೋಪಿಯನ್ನ ವಶಕ್ಕೆ ಪಡೆದಿದ್ದು, ಆತನಿಂದ ಮಟ್ಕ‍ಾ ಜೂಜು ಸಾಮಾಗ್ರಿಗಳು. ಹಾಗೂ ‍ಅರೋಪಿಯಿಂದ 600₹ನಗದು ಹಣ ವಶಕ್ಕೆ ಪಡೆದಿದ್ದು, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ. *ಗುಡೇಕೋಟೆ*- ಗುಡೇಕೋಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ, ತಿಮ್ಮನಹಳ್ಳಿ ಗ್ರಾಮದ ಹೊರವಲಯದಲ್ಲಿ. ಮಟ್ಕ‍ಾ ಜೂಜಾಟ ಜರುಗುತ್ತಿರುವ ಖಚಿತ ಮಾಹಿತಿಯನ್ನಾಧರಿಸಿ, ಗುಡೇಕೋಟೆ ಪೊಲೀಸರು ಪಿಎಸೈ ಮಾಲಿಕ್ ಸಾಬ್ ಕಲಾರಿ ನೇತೃತ್ವದಲ್ಲಿ ದಾಳಿ ನಡೆಸಿದ್ದು. ದಾಳಿ ವೇಳೆ ಓರ್ವ ಆರೋಪಿಯನ್ನ ಬಂಧಿಸಲಾಗಿದ್ದು. ಆತನಿಂದ ಜೂಜಾಟಕ್ಕೆ ಬಳಸಿದ್ದ ಸಾಮಾಗ್ರಿಗಳನ್ನು, ಮತ್ತು 199₹ನಗದು ಹಣ ಒಶಕ್ಕೆ ಪಡೆಯಲಾಗದ್ದು. ಈ ಕುರಿತಂತೆ ಗುಡೇಕೊಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೆಶಪ್ಪ ವಿ ಮಲ್ಲ‍ಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend