ಕೂಡ್ಲಿಗಿ:ಗಾಂಧೀ ಸ್ಮಾರಕಕ್ಕೆ ಗೌರವ ಸಮರ್ಪಿಸಿದ ಸಚಿವ ಜಮೀರ್ ಅಹಮದ್ ಖಾನ್ -ವಿಜಯನಗರ ಜಿಲ್ಲೆ ಕೂಡ್ಲಿಗಿ: ಆ10ರಂದು ಪಟ್ಟಣದ ಗಾಂದೀ ಚಿತಾಭಸ್ಮ ರಾಷ್ಟ್ರೀಯ ಸ್ಮಾರಕಕ್ಕೆ, ಕರ್ನಾಟಕ ರಾಜ್ಯ ಸರಕಾರದ ವಸತಿ ಸಚಿವರು, ಹಾಗೂ ವಿಜಯ ನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ರವರು. ಕೂಡ್ಲಿಗಿ ಶಾಸಕರಾದ ಡಾ” ಎನ್.ಟಿ. ಶ್ರೀನಿವಾಸ್ ರವರೊಂದಿಗೆ ತೆರಳಿ ಭೇಟಿ ನೀಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು. ಸಚಿವರು ವಿವಿಧ ಕಾಮಗಾರಿ ಹಾಗೂ ಪ್ರಗತಿ ಪರೀಶೀಲನೆ, ಹಾಗೂ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಳ್ಳಲು ಅವರು ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸಿದ್ದರು. ಅವರು ಪಟ್ಟಣ ಪ್ರವೇಶಿಸುತ್ತಿದ್ದಂತೆ,
ಶ್ರೀ ರಾಜವೀರ ಮದಕರಿನಾಯಕ ವೃತ್ತದಿಂದ. ಕುಂಭ ಹೊತ್ತ ಮಹಿಳೆಯರ ಮೆರವಣಿಗೆ ಮೂಲಕ, ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ನಂತರ ರಾಷ್ಟ್ರೀಯ ಚಿಂತಕರು ಹಾಗೂ ಭಾರತದ ಪಿತಾಮಹರಾದ ಮಹಾತ್ಮ ಗಾಂಧಿ ಚಿತಾ ಭಸ್ಮಕಕ್ಕೆ, ಭೇಟಿ ನೀಡಿ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು. ಕ್ಷೇತ್ರದ ಶಾಸಕರು ಕಳೆದ ಅಧಿವೇಶನದಲ್ಲಿ ಗಾಂಧಿ ಚಿತಾ ಭಸ್ಮ ಕುರಿತು, ಅಭಿವೃದ್ಧಿಗೆ ಒತ್ತು ನೀಡುವಂತೆ ಧ್ವನಿ ಎತ್ತಿದ್ದನ್ನು ಇಲ್ಲಿ ಸ್ಮರಿಸಲಾಯಿತು. ಹಾಗೆಯೇ ಶಾಸಕರು ಗಾಂಧಿ ಚಿತಾ ಭಸ್ಮವನ್ನು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಗೊಳಿಸಬೇಕಿದೆ. ಈ ಕುರಿತಂತೆ ಸಚಿವರ ಬಳಿ ಶಾಸಕರು ಚರ್ಚಿಸಿದರು, ಮತ್ತು ಈಗಾಗಲೇ ತಾವು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು. “ಕ್ರಾಂತಿ ಕಾರಿ ಕವಿ ಗದ್ದರ್ ಗೆ ಶ್ರದ್ಧಾಂಜಲಿ- ಇದಕ್ಕೂ ಮುನ್ನ ಡಾ” ಬಿ.ಆರ್. ಅಂಬೇಡ್ಕರ್ ರವರ ವೃತ್ತದ ಬಳಿ, ದಲಿತ ಮುಖಂಡರು ಹಮ್ಮಿಕೊಂಡಿದ್ದ ತೆಲುಗು ಕ್ರಾಂತಿ ಕವಿ “ಗದ್ದರ್” ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ. ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು ಭಾಗವಹಿಸಿ , ಗೌರವ ಪೂರ್ವಕವಾಗಿ ಶ್ರದ್ಧಾಂಜಲಿ ಅರ್ಪಿಸಿದರು. ಪಟ್ಟಣ ಸೇರಿದಂತೆ ತಾಲೂಕಿನ ದಲಿತ ಮುಖಂಡರು, ವಿವಿದ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವರದಿ,ವಿ. ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030