ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಮೇಲ್ಗೈ ಸಾಧಿಸಿದರು ಅದರಲ್ಲಿ ವಿಶೇಷವಾಗಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಮಟ್ಟದ ರಸಪ್ರಶ್ನೆ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ
ವಿಶೇಷವೇನೆಂದರೆ ಸರಕಾರಿ ಶಾಲೆಗಳು ತಮ್ಮ ಪ್ರತಿಭೆಯನ್ನು ಮತ್ತೆ ಸಾಬೀತು ಮಾಡುತ್ತಿದ್ದಾರೆ ಉತ್ತಮ ಶಿಕ್ಷಕರು ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಹಾಗೂ ಅತ್ಯುತ್ತಮ ಉತ್ಸಾಹ ತೋರಿಸುತ್ತಿದ್ದಾರೆ ಇದೊಂದು ಶ್ಲಾಘನೀಯ ಖಾಸಗಿ ಶಾಲೆಗಳ ಹಿಂದಿಕ್ಕಿದೆ ಇಂಥ ಶಾಲೆಗಳಿಗೆ ಪ್ರೋತ್ಸಾಹ ಬೇಕಾಗಿದೆ ಹಾಗೂ ಇದೊಂದು ಶಿಕ್ಷಣ ಕ್ರಾಂತಿಯಂದೇ ಹೇಳಬಹುದು
2023-24 ಸಾಲಿನ ತಾಲೂಕು ಮಟ್ಟದ ವಿಜ್ಞಾನ ನಾಟಕ (13)ಮತ್ತು ವಿಜ್ಞಾನ ವಿಚಾರಗೋಷ್ಠಿ( 29) ಸ್ಪರ್ಧೆಯಲ್ಲಿ ಭಾಗವಹಿಸಿದ ಶಾಲೆಗಳಲ್ಲಿ
ಪ್ರಥಮ ಸ್ಥಾನ :- ಸರ್ಕಾರಿ ಪ್ರೌಢಶಾಲೆ ಢಣಾಪುರ ಶಾಲೆ ಪಡೆದಿರುತ್ತದೆ
ದ್ವಿತೀಯ ಸ್ಥಾನ :- ನ್ಯಾಷನಲ್ ಪ್ರೌಢಶಾಲಾ ಹೊಸಪೇಟೆ
ತೃತೀಯ ಸ್ಥಾನ :- ನಿವೇದಿತಾ ಪ್ರೌಢಶಾಲೆ ಹೊಸಪೇಟೆ
ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ಧೆ :–
ಪ್ರಥಮ ಸ್ಥಾನ:- ದಾವಲ್ ಸಾಬ್ ಎಸ್ ಎಂ ಬಾಲಕರ ಸರ್ಕಾರಿ ಪ್ರೌಢಶಾಲೆ ಕಂಪ್ಲಿ
ದ್ವಿತೀಯ ಸ್ಥಾನ :– ವಿಶ್ವಾಸ್, ಆದರ್ಶ ವಿದ್ಯಾಲಯ ಹೊಸಪೇಟೆ
ತೃತೀಯ ಸ್ಥಾನ :- ಮಹಿಳಾ ಸಮಾಜ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹೊಸಪೇಟೆದಿನಾಂಕ 8.9.2023 ರಂದು ಭಾರತ ವಿಕಾಸ್ ಪರಿಷದ್, ಹಾಗೂ ರೋಟರಿ ಕ್ಲಬ್ ಮತ್ತು ಜೀತೋ ಸಂಘಗಳ ವತಿಯಿಂದ ನಡೆದ ಭಾರತ್ ಜಾನೋ (ಭಾರತವನ್ನು ತಿಳಿಯಿರಿ ) ವಿಷಯದ ಮೇಲೆ ಪ್ರೌಢಶಾಲಾ ವಿಭಾಗದಲ್ಲಿ
ಆದರ್ಶ ವಿದ್ಯಾಲಯದ :-ವಿದ್ಯಾರ್ಥಿಗಳಾದ ಯಶವಂತ್ ಮತ್ತು ಸುರೇಶ್ ಚೌದರಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಆದರ್ಶ ವಿದ್ಯಾಲಯ :- ವಿದ್ಯಾರ್ಥಿಗಳು ಜೂನಿಯರ್ ರಸಪ್ರಶ್ನ ವಿಭಾಗದಲ್ಲಿ ಸುಪ್ರತೆಜ್ ವರ್ಮ ಹಾಗೂ ಕಿರಣ್ ಹಡಗಲಿ ಎಂಬ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುತ್ತಾರೆ. ಸುಮಾರು ಈ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿರುತ್ತಾರೆ…
ವರದಿ. ಗಣೇಶ್, ಬಿ, ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030