ವೀಕೆಂಡ್ ಕರ್ಪ್ಯೂ ಒಂದೇ ದಿನ 1750 ದೂರು ದಾಖಲು ಮಾಡಿದ ಚಿತ್ರದುರ್ಗ ಜಿಲ್ಲೆಯ ಪೊಲೀಸರುವೀಕೆಂಡ್ ಕರ್ಪ್ಯೂ ಒಂದೇ ದಿನ 1750 ದೂರು ದಾಖಲು ಮಾಡಿದ ಚಿತ್ರದುರ್ಗ ಜಿಲ್ಲೆಯ ಪೊಲೀಸರು
ಚಿತ್ರದುರ್ಗದ: ಕೊವಿಡ್ ಸೊಂಕಿನ ಮೂರನೆ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯಸರಕಾರವು ವಾರಂತ್ಯದ ವೀಕೆಂಡ್ ಕರ್ಪ್ಯೂ ಹಾಕಲಾಗಿತ್ತು. ಇದರಿಂದಾಗಿ ಚಿತ್ರದುರ್ಗದಲ್ಲಿ ನಿನ್ನೆ ಪೀಲ್ಡ್ ಗಿಳಿದ ಪೊಲೀಸರು ಅನಾವಶ್ಯಕವಾಗಿ ರಸ್ತೆಗಳಲ್ಲಿ ಹೋಡಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು.
ಇನ್ನು ಮಾಸ್ಕ್ ಹಾಕದೆ ರಸ್ತೆಗಿಳಿದ ವಾಹನ ಸವಾರ ಮೇಲೆ ಪೊಲೀಸರು ಕೇಸ್ ದಾಖಲು ಮಾಡುವ ಮೂಲಕ ನಿನ್ನೆ ಒಂದೆ ದಿನ 1750ದೂರುಗಳನ್ನು ಹಾಕಿದ್ದಾರೆ. ಅಲ್ಲದೆ 17500ರೂಗಳ ದಂಡವನ್ನು ವಸೂಲು ಮಾಡಲಾಗಿದೆ.
ಇನ್ನು ಜಿಲ್ಲೆಯಲ್ಲಿ ಕಳೆದ 24ಘಂಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ವೀಕೆಂಡ್ ಕರ್ಪ್ಯೂ ಶಾಂತಿಯುತವಾಗಿ ಪೂರ್ಣ ಗೊಂಡಿದೆ ಎಂದು ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ರಾಧಿಕಾ ತಿಳಿಸಿದ್ದಾರೆ…
ವರದಿ. ಸುರೇಶ್, ಕೆ, ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030