ಕ್ಷೌರಿಕನ ಜೊತೆ ನಗೆಚೆಷ್ಟೆ ಮಾಡಿ ಕೋಲೆಯಾದ ಹದಿಹರಿಯದ ಯುವಕ.
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮದಲ್ಲಿ ಯುವಕರ ನಗೆಚೆಷ್ಟೆಗೆ ನಡಿಯಿತು ಕೋಲೆ ಕಾರಣಾದೆ ಗ್ರಾಮದ ಅಣ್ಣಪ್ಪ ನಾವಿ ಎಂಬುವರ ಕಟಿಂಗ್ ಅಂಗಡಿಯಲ್ಲಿ ಗ್ರಾಮದ ಯುವಕರೆಲ್ಲ ದಿನ ನಿತ್ಯ ಕಟಿಂಗ್ ಮಾಡಿಸಲು ಸಾಲು ಗಟ್ಟಿ ನಿಂತು ಹೇರ್ ಕಟಿಂಗ್ ಮಾಡಿಸುತ್ತಿರುತ್ತಾರೆ ಅದರಂತೆ ಗ್ರಾಮದ ಸಾಗರ ಎಂಬ ಯುವಕ ಅಣ್ಣಪ್ಪ ನಾವಿ ಎಂಬ ಕಟಿಂಗ್ ಅಂಗಡಿಯವನ ಜೊತೆ ನಗೆಚೆಷ್ಟೆ ಮಾಡುತ್ತಿದ್ದ ಇದರಿಂದ ತುಂಬಾ ಕೆರಳಿದ್ದ ಅಣ್ಣಪ್ಪ ನಾವಿ ಹಲವಾರು ಬಾರಿ ಸಾಗರನಿಗೆ ತಾಕಿತ್ತು ಮಾಡಿದ್ದ ನನ್ನ ಜೊತೆ ನಗೆಚೆಷ್ಟೆ ಮಾಡಬೇಡ ಅಂತಾ ತಾಕಿತ್ತು ಮಾಡಿದ್ದರೂ ಸಲುಗೆಯಿಂದ ಮತ್ತೆ ಇಂದು ಕಟಿಂಗ್ ಮಾಡಿಸಲು ಹೋದಾಗ ತಲೆ ಕೂದಲಿಗೆ ಕಲರ್ ಹಚ್ಚಲು ಹೇಳಿದ್ದಾನೆ.
ಅದಕ್ಕೆ ಅಣ್ಣಪ್ಪ ಇಪ್ಪತ್ತು ರೂಪಾಯಿ ದುಡ್ಡು ಕೇಳಿದ್ದಾನೆ ಅದಕ್ಕೆ ಸಾಗರ ಪ್ರತಿಯಾಗಿ ನಿನ್ನೆ ಕಟಿಂಗ್ ಮಾಡಿಸಿದ್ದಿನಿ ಅದರ ಲೆಕ್ಕದಲ್ಲಿ ಕಲರ್ ಹಚ್ಚು ಅಂತಾ ಹೇಳಿದ್ದಾನೆ ಸಾಗರನ ಹೇಳುವ ದಾಟಿ ಸ್ವಲ್ಪ ನಗೆಚೆಷ್ಟೆಯಾಗಿದ್ದರಿಂದ ಕುಪಿತಗೊಂಡ ಅಣ್ಣಪ್ಪ ತನ್ನ ಕೈಯಲ್ಲಿದ್ದ ಕತ್ತರಿಯಿಂದ ಸಾಗರನ ಎದೆಗೆ ಜೊರಾಗಿ ಚುಚ್ಚಿದ್ದಾನೆ ಚುಚ್ಚಿದ ರಭಸಕ್ಕೆ ರಕ್ತ ಚಲ್ಲಾ ಪಿಲ್ಲಯಾಗಿ ಅಂಗಡಿ ತುಂಬೆಲ್ಲಾ ಬಿದ್ದಿದೆ ಅತಿವ ರಕ್ತಸ್ರಾವವಾಗಿ ಸಾಗರ ಸ್ಥಳದಲ್ಲಿ ಸಾವನಪ್ಪಿದ್ದಾನೆ.ಇದು ಕೋಲೆ ಅಂತಾ ಗೊತ್ತಾಗಿ ಸಾಗರನ ಮನೆಯವರು ಬಂದು ಬನಹಟ್ಟಿ ಪೋಲಿಸರಿಗೆ ಮಾಹಿತಿ ಕೊಟ್ಟು ದೂರು ನೀಡಿದ್ದಾರೆ ದೂರು ಸ್ವೀಕರಿಸಿಕೊಂಡ ಬನಹಟ್ಟಿ ಪೋಲಿಸರು ತನಿಖೆ ನಡೆಸಿದ್ದಾರೆ .ಆದರೆ ಹದೆಹರಿಯದ ಯುವಕ ನಗೆಚೆಷ್ಟೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವುದು ತಾಲ್ಲೂಕಿನ ಜನರಲ್ಲಿ ತಲ್ಲನವನ್ನುಂಟುಮಾಡಿದೆ.
ವರದಿ.
ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030