ದೇವರ ಆಭರಣ ಕದ್ದ ಆರೋಪಿ ಬಂಧನ
ತಾಲ್ಲೂಕಿನ ಕಮಂಡಲಗೊಂದಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಇತ್ತೀಚಿಗೆ ದೇವರ ವಿಗ್ರಹ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
ಚಿತ್ರದುರ್ಗ ಜಿಲ್ಲೆಯ ಚಿಪ್ಪಿನಕೆರೆ ಗ್ರಾಮದ ಮುತ್ತುರಾಜ್ ಬಂಧಿತ ಆರೋಪಿ, ಈತ ಕಮಂಡಲಗೊಂದಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳದೆ ಮೇ 16 ರಂದು ಸುಮಾರು ನಾಲ್ಕು ಕೆ.ಜಿಯ ತೂಕದ ಬೆಳ್ಳಿಯ ವಿಗ್ರಹ, 5 ಗ್ರಾಂ ತೂಕದ ಬಂಗಾರದ ಕಣ್ಣು ಸೇರಿದಂತೆ 1 ಲಕ್ಷದ 10 ಸಾವಿರ ರೂ ಬೆಲೆ ಬಾಳುವ ಆಭರಣವನ್ನು ರಾತ್ರೋರಾತ್ರಿ ಕದ್ದು ಪರಾರಿಯಾಗಿದ, ಈ ಸಂಬಂಧ ಜಗಳೂರು ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು, ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸ್ ಅಧಿಕಾರಿಗಳು ಕಳ್ಳರನ್ನು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರರಕರಣದಲ್ಲಿ ಆರೋಪಿ ಪತ್ತೆ ಕಾರ್ಯಾಚರಣೆಯನ್ನು ಈ ಹಿಂದೆ ಇದ್ದ ಪೊಲೀಸ್ ಅಧೀಕ್ಷಕರಾದ ಹನುಮಂತರಾಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೀವ್ ಗ್ರಾಮಂತರ ಡಿವೈಎಸ್ಪಿ ನರಸಿಂಹ ವಿ ತ್ರಾಮಧ್ವಜ ಇವರುಗಳ ಮಾರ್ಗದರ್ಶನದಲ್ಲಿ ಜಗಳೂರು ವೃತ್ತ ನಿರೀಕ್ಷಕರಾದ ಮಂಜುನಾಥ ಪಂಡಿತ್, ಇವರ ನೇತೃತ್ವದಲ್ಲಿ ಪಿ,ಎಸ್,ಐ ಸಂತೋಷ ಬಾಗೋಜಿಯವರ ತಂಡ ಆರೋಪಿ ಪತ್ತೆ ಕಾರ್ಯದಲ್ಲಿದ್ದರು.
ವರದಿ. ಸಂದೀಪ್, ಎಚ್, ಜಗಳೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030