ಲೋಕಸಭಾ ಚುನಾವಣಾ ನಿಮಿತ್ತ ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಹೊಳಲ್ಕೆರೆ ಪೋಲಿಸ್ ಇಲಾಖೆ ವತಿಯಿಂದ ಮತದಾನ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಪಥ ಸಂಚಲನಾ ನಡೆಸಿದರು.
ಪಥ ಸಂಚಲನ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ಅರೆ ಸೇನಾ ಪಡೆ ಸಿಬ್ಬಂದಿಗಳು ಭಾಗವಹಿಸಿದ್ದರು.
ನಿರ್ಭಯವಾಗಿ ತಮ್ಮ ಹಕ್ಕನ್ನು ತಾವು ಚಲಾಯಿಸಿ, ಮತದಾರರ ಜೊತೆ ನಾವಿದ್ದೇವೆ. ಮತದಾನಕ್ಕೆ ಯಾವುದೇ ಭಯ, ಆತಂಕ ಬೇಡ ಎಂಬ ಸಂದೇಶಗಳನ್ನು ಮತದಾರರಿಗೆ ತಲುಪಿಸುವ ಪ್ರಯತ್ನ ಮಾಡಲಾಯಿತು.
ರಾಮಗಿರಿ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣದ ವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಹೊಳಲ್ಕೆರೆ ಪಿಎಸ್ಐ ಗಳಾದ ಸುರೇಶ್, ನೇತ್ರಾವತಿ, ರಾಮಗಿರಿ ಮುಖ್ಯ ಪೇದೆ ರಾಘವೇಂದ್ರ , ಸಿಬ್ಬಂದಿಗಳಾದ ನಾಗರಾಜ್, ಹೇಮಂತ್ ಹಾಗೂ ಅರೆ ಸೇನಾ ಪಡೆ ಸಿಬ್ಬಂದಿಗಳು ಇದ್ದರು. ಹೊಳಲ್ಕೆರೆ ತಾಲೂಕಿನ ರಾಮಗಿರಿ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣದ ವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು. ರಾಮಗಿರಿ ಮುಖ್ಯ ಪೇದೆ ರಾಘವೇಂದ್ರ , ಸಿಬ್ಬಂದಿಗಳಾದ ನಾಗರಾಜ್, ಹೇಮಂತ್ ಹಾಗೂ ಅರೆ ಸೇನಾ ಪಡೆ ಸಿಬ್ಬಂದಿಗಳು ಇದ್ದರು…
ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030